Advertisement

ನ್ಯಾಯವಾದಿಗಳ ಭಡ್ತಿಗೆ ನೆರವಾದ ಗುಪ್ತಚರ ದಳ

10:45 AM Oct 06, 2019 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಆಕ್ಷೇಪದ ನಡುವೆಯೂ ನಾಲ್ವರು ನ್ಯಾಯವಾದಿಗಳಿಗೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಭಡ್ತಿ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮೇಲುಗೈ ಸಾಧಿಸಿದೆ.

Advertisement

ವಿವಿಧ ಆರೋಪ ಹಾಗೂ ಕಾರಣಗಳನ್ನು ಹೇಳಿ ಈ ನ್ಯಾಯವಾದಿಗಳ ಭಡ್ತಿಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಡ್ಡಗಾಲು ಹಾಕಲು ಪ್ರಯತ್ನಿಸಿದರೂ ಆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದಲೇ ವರದಿ ಪಡೆಯುವ ಮೂಲಕ ಕೊಲಿಜಿಯಂ, ಎಲ್ಲ ನಾಲ್ವರು ನ್ಯಾಯ ವಾದಿಗಳೂ ಶುದ್ಧಹಸ್ತರು ಎಂದು ತಿಳಿಸಿ ಭಡ್ತಿಗೆ ಒಪ್ಪಿಗೆಯ ಮುದ್ರೆ ಒತ್ತಿದೆ.

ಗುಪ್ತಚರ ವರದಿ
ಸರಕಾರದ ಆಕ್ಷೇಪಗಳಿಗೆ ಏಕಾಏಕಿ ಮಣೆ ಹಾಕದ ಕೊಲಿಜಿಯಂ ಗುಪ್ತ ಚರ ಇಲಾಖೆಯ ಮೂಲಕ ಮಾಹಿತಿ ಸಂಗ್ರಹಿಸಿತು. ಅದರಂತೆ ಈ ನ್ಯಾಯವಾದಿಗಳು ಶುದ್ಧಹಸ್ತರಾಗಿದ್ದು, ವೃತ್ತಿಪರವಾಗಿಯೂ, ವೈಯಕ್ತಿಕವಾಗಿಯೂ ಉತ್ತಮ ವರ್ಚಸ್ಸು ಹೊಂದಿದ್ದಾರೆ ಎಂದು ವರದಿ ನೀಡಿದೆ.

ಯಾರಿವರು ವಕೀಲರು?
2019ರ ಮಾರ್ಚ್‌ 25ರಂದು ಕೊಲಿಜಿಯಂ 9 ವಕೀಲರ ಹೆಸರು ಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ಈ ಪೈಕಿ ನಾಲ್ವರ ಹೆಸರನ್ನು ಸರಕಾರ ವಾಪಸ್‌ ಕಳುಹಿಸಿತ್ತು. ಅವರೆಂದರೆ ಸವಣೂರು ವಿಶ್ವಜಿತ್‌ ಶೆಟ್ಟಿ, ಮರಲೂರು ಇಂದ್ರ ಕುಮಾರ್‌ ಅರುಣ್‌, ಮೊಹಮ್ಮದ್‌ ಘೌಸ್‌ ಶುಕೂರೆ ಕಮಾಲ್‌ ಮತ್ತು ಎಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್‌.

Advertisement

Udayavani is now on Telegram. Click here to join our channel and stay updated with the latest news.

Next