Advertisement
ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಸುವ ಹೊಣೆ ಹೊತ್ತಿರುವ ಜಲಮಂಡಳಿಯು, ವಯಕ್ತಿಕ ಮನೆಗಳಿಗೆ ಹೋಲಿಸಿದರೆ ಅಪಾರ್ಟ್ಮೆಂಟ್ಗಳಿಗೆ ಕಾವೇರಿ ನೀರಿನ ಸಂಪರ್ಕ, ನೀರಿನ ದರ ಸೇರಿದಂತೆ ಜಲಮಂಡಳಿಯಿಂದ ನೀಡುವ ಎಲ್ಲಾ ಬಗೆಯ ಸೇವೆಗೆ ಹೆಚ್ಚು ಶುಲ್ಕ ವಸೂಲಿ ಮಾಡುತ್ತದೆ ಎಂಬ ಆರೋಪ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೇಳಿಬರುತ್ತಿದೆ.
Related Articles
Advertisement
ಮೂರೂ ಅಭ್ಯರ್ಥಿಗಳು ಆಶ್ವಾಸನೆ ಕೊಟ್ಟಿದ್ದರು: ಅಪಾರ್ಟ್ಮೆಂಟ್ಗಳಿಗೆ ಜಲಮಂಡಳಿ ಮಾಡುತ್ತಿರುವ ಅನ್ಯಾಯ ಹಾಗೂ ತಾರತಮ್ಯ ಕುರಿತು 2018ರ ವಿಧಾನಸಭೆ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಬಳಿ ಚರ್ಚಿಸಿದ್ದೆವು. ಅವರೂ, ಅಧಿಕಾರಕ್ಕೆ ಬಂದರೆ ಸರಿಪಡಿಸುವುದಾಗಿ ಭರವಸೆ ನೀಡುವ ಜತೆಗೆ ಪ್ರತಿಜ್ಞೆಯನ್ನು ಮಾಡಿ ಹೋಗಿದ್ದರು.
ಆದರೆ, ಚುನಾವಣೆ ಮುಗಿದು ವರ್ಷಗಳು ಕಳೆಯುತ್ತಾ ಬಂತು, ನಮ್ಮ ಸಮಸ್ಯೆಗಳತ್ತ ಯಾರೊಬ್ಬರೂ ತಿರುಗಿ ನೋಡಿಲ್ಲ. ಹೀಗಾಗಿ, ಈ ಬಾರಿ ಮತಯಾಚನೆಗೆ ಬರುವವರಿಗೆ ಈ ಹಿಂದೆ ಮಾಡಿದ ಪ್ರತಿಜ್ಞೆ, ಕೊಟ್ಟ ಭರವಸೆಗಳನ್ನು ನೆನಪಿಸುವ ಮೂಲಕ ಒತ್ತಡ ಹೇರುತ್ತೇವೆ. ಅವರು ತಮ್ಮ ಪಕ್ಷದ ಮೇಲೆ ಒತ್ತಡ ಹಾಕಿ ಸಮಸ್ಯೆ ಬಗೆಹರಿಸಿಕೊಡಲಿ ಎನ್ನುತ್ತಾರೆ ಫೆಡರೇಷನ್ ಉಪಾಧ್ಯಕ್ಷ ಕೆ.ವಿ.ಪ್ರಸನ್ನ.
ಪ್ರಮುಖ ಬೇಡಿಕೆಗಳೇನು?-ಸುಂಕದ ಸಮಾನತೆ, ಸೇವೆಗೆ ಮಾತ್ರ ಶುಲ್ಕ
-ಅನಗತ್ಯ ವಾಣಿಜ್ಯ ಶುಲ್ಕ ವಿಧಿಸಿರುವುದನ್ನು ನಿಲ್ಲಿಸಬೇಕು
-ಖಾಸಗಿ ಟ್ಯಾಂಕರ್ಗಳಿಗೆ ಕಡಿವಾಣ ಹಾಕಬೇಕು
-ಸಾಮಾನ್ಯ ಮನೆಗಳಿಗೆ ವಿಧಿಸುವ ಕಾವೇರಿ ನೀರಿನ ಶುಲ್ಕವನ್ನೇ ಅಪಾರ್ಟ್ಮೆಂಟ್ಗಳಿಗೂ ವಿಧಿಸಬೇಕು
(ಪ್ರಸ್ತುತ ಸಾಮಾನ್ಯ ಮನೆಗಳಿಗೆ 1000 ಲೀ – 7ರೂ. / ಅಪಾರ್ಟಮೆಂಟ್ಗಳಿಗೆ 1000 ಲೀ-22 ರೂ. ಸಾಮಾನ್ಯ ಮನೆಗಳಿಗೆ ಹೊಸ ಸಂಪರ್ಕಕ್ಕೆ 25ರಿಂದ 40 ಸಾವಿರ ರೂ/ ಅಪಾರ್ಟ್ಮೆಂಟ್ಗಳಿಗೆ 1 ಲಕ್ಷ ರೂ.ನಿಂದ 1.25 ಲಕ್ಷ ರೂ. ಇದೆ) ಅಪಾರ್ಟ್ಮೆಂಟ್ಗಳಿಗೆ ಮತಯಾಚನೆಗೆ ಬರುವ ಅಭ್ಯರ್ಥಿಗಳಿಗೆ ಜಲಮಂಡಳಿಯಿಂದ ನಮಗೆ ಆಗುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಈ ಕುರಿತು ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ವೇಳೆ ನೀಡಿದ್ದ ಭರವಸೆಯನ್ನು ಮುಂದಿಡುತ್ತೇವೆ. ಇದರಿಂದ ಅಭ್ಯರ್ಥಿ, ತಮ್ಮ ಪಕ್ಷದ ಮೇಲೆ ಒತ್ತಡ ಹಾಕಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಹುದು.
-ಶ್ರೀಕಾಂತ್ ನರಸಿಂಹನ್, ಫೆಡರೇಷನ್ ಕಾರ್ಯದರ್ಶಿ * ಜಯಪ್ರಕಾಶ್ ಬಿರಾದಾರ್