Advertisement

ಜೀವನದಿ ನೇತ್ರಾವತಿಗೆ ಜೀವಕಳೆ

10:43 PM Jun 13, 2019 | Team Udayavani |

ಬೆಳ್ತಂಗಡಿ: ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಜೀವನದಿ ನೇತ್ರಾವತಿ ಸಹಿತ ತಾಲೂಕಿನ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಳೆದೊಂದು ತಿಂಗಳಿಂದ ಧರ್ಮಸ್ಥಳ ಸ್ನಾನಘಟ್ಟ ನೇತ್ರಾವತಿಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದರಿಂದ ಭಕ್ತರ ತೀರ್ಥಸ್ನಾನಕ್ಕೆ, ದಿನ ಬಳಕೆಗೆ ನೀರಿನ ಅಭಾವ ಆತಂಕ ಎದುರಾಗಿತ್ತು. ಸದ್ಯ ಚಾರ್ಮಾಡಿ ಸಹಿತ ಘಟ್ಟ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಬತ್ತಿದ ನದಿ-ತೊರೆಗಳಿಗೆ ಜೀವಕಳೆ ಬಂದಿದೆ.

Advertisement

ತುಂಬಿದ ನೇತ್ರಾವತಿ ಡ್ಯಾಂ
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ದಲ್ಲಿನ ಕಿಂಡಿ ಅಣೆಕಟ್ಟು ಭರ್ತಿ ಯಾಗಿದೆ. ನದಿ ನೀರನ್ನೇ ಆಶ್ರಯಿಸಿದ್ದ ಕೃಷಿಕರು ಹರ್ಷದಲ್ಲಿದ್ದಾರೆ. ನೇತ್ರಾವತಿ ಸ್ನಾನಘಟ್ಟದಲ್ಲಿ ಭಕ್ತರು ತೀರ್ಥಸ್ನಾನದಲ್ಲಿ ಪಾಲ್ಗೊಂಡರು.

ಗರಿಗೆದರಿದ ಕೃಷಿ ಚಟುವಟಿಕೆ
ತಾ|ನಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆ ಸೊರಗಿತ್ತು. ಇತ್ತ ಮಂಗಾರು ವಿಳಂಬ ವಾಗಿದ್ದರಿಂದ ಈಗಾಗಲೇ ಭತ್ತ ಕೃಷಿ ಆರಂಭಿಸಬೇಕಿದ್ದ ಕೃಷಿಕರಲ್ಲೂ ಆತಂಕ ತರಿಸಿತ್ತು. ಸದ್ಯ ಮಳೆ ಪ್ರಮಾಣ ಏರಿಕೆಯಾ ದ್ದರಿಂದ ಕೃಷಿ ಚಟುವಟಿಕೆಗೆ ಕಳೆಬಂದಿದೆ.
ಕೃಷಿ ಇಲಾಖೆ 50 ಕ್ವಿಂಟಾಲ್‌ ಬಿತ್ತನೆ ಬೀಜ ದಾಸ್ತಾನು ಇರಿಸಿತ್ತು. ಈಗಾಗಲೇ 108 ರೈತರು 30 ಕ್ವಿಂಟಾಲ್‌ ಭತ್ತ ಖರೀದಿಸಿದ್ದಾರೆ. ಸದ್ಯ 20 ಕ್ವಿಂಟಾಲ್‌ ದಸ್ತಾನಿದೆ ಎಂದು ತಾಂತ್ರಿಕ ಕೃಷಿ ಅಧಿಕಾರಿ ಹುಮೇರ ಜಬೀನ್‌ ತಿಳಿಸಿದ್ದಾರೆ.

ಆತಂಕ ನಿವಾರಣೆ
ಧರ್ಮಸ್ಥಳ ಡ್ಯಾಂನಿಂದ ಗ್ರಾ.ಪಂ.ನ ವ್ಯಾಪ್ತಿಯ 200 ಮನೆಗಳಿಗೆ ನೀರಿನ ಸಂಪರ್ಕ ನೀಡಿಲಾಗಿದೆ. ಮಳೆಯಾಗದೆ ಸ್ವಲ್ಪಮಟ್ಟಿಗೆ ಆತಂಕ ಎದುರಾಗಿತ್ತು. ಡ್ಯಾಂನಲ್ಲಿ ನೀರು ಭರ್ತಿಯಾಗಿರುವುದರಿಂದ ಇದ್ದ ಆತಂಕ ನಿವಾರಣೆಯಾಗಿದೆ.
– ಉಮೇಶ್‌ ಕೆ. ಪಿಡಿಒ, ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next