Advertisement

ನೇತ್ರಾವತಿ ಸೇತುವೆ;ಅಪಾಯದಲ್ಲಿ ಸಿಲುಕಿದ್ದ ನಾಯಿ ಹಾಗೂ ಆರು ಮರಿಗಳ ರಕ್ಷಣೆ

07:28 PM Aug 11, 2019 | sudhir |

ಮಂಗಳೂರಿನ ಜಪ್ಪಿನಮೊಗರು, ಕಡೇಕಾರಿನ ನೇತ್ರಾವತಿ ಸೇತುವೆ ಸಮೀಪ ನಾಯಿ ಹಾಗೂ ಅದರ ಆರು ಮರಿಗಳು ಸಿಕ್ಕಿಹಾಕಿಕೊಂಡಿದ್ದು, ಅದನ್ನು ರಕ್ಷಿಸಿ ಎಂದು ಸ್ಥಳೀಯ ನಿವಾಸಿ ನಿತೇಶ್ ಸುವರ್ಣ ಆ್ಯನಿಮಲ್ ಕೇರ್ ಟ್ರಸ್ಟ್ ನ ಟ್ರಸ್ಟಿ ಸುಮಾ ಆರ್.ನಾಯಕ್ ಅವರಿಗೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಮಾಹಿತಿ ಪಡೆದ ನಂತರ ಎಸಿಟಿ ಸದಸ್ಯರಾದ ರವಿ, ಪ್ರಸಾದ್, ಸ್ವಯಂಸೇವಕರಾದ ಅನೀಶ್, ಸಮೀರ್ ಮತ್ತು ಶಮಿತ್ ಕುಮಾರ್ ದೋಣಿ ಮೂಲಕ ಜಪ್ಪಿನಮೊಗರು ಬಳಿ ತೆರಳಿದ್ದರು. 15 ನಿಮಿಷದಲ್ಲಿ ಸ್ಥಳಕ್ಕೆ ತೆರಳುವ ಮೂಲಕ ನಾಯಿ ಹಾಗೂ ಆರು ಮರಿಗಳನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next