Advertisement

ಮುಖರ್ಜಿ ನಿಧನದ ತನಿಖೆಗೆ ನಿರಾಕರಿಸಿದ್ದ ನೆಹರೂ

12:29 AM Jun 24, 2019 | Sriram |

ಹೊಸದಿಲ್ಲಿ: ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ ಪ್ರಸಾದ್‌ ಮುಖರ್ಜಿ ನಿಧನದ ಬಗ್ಗೆ ತನಿಖೆ ನಡೆಸಲು ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ನಿರಾಕರಿಸಿದ್ದರು ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ. ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಮುಖರ್ಜಿ ಪುಣ್ಯಸ್ಮರಣೆ ವೇಳೆ ಅವರು, ಈ ಹೇಳಿಕೆ ನೀಡಿದ್ದಾರೆ. ಮುಖರ್ಜಿ ನಿಧನದ ಕುರಿತು ತನಿಖೆ ನಡೆಸುವಂತೆ ಇಡೀ ದೇಶವೇ ಆಗ್ರಹಿಸಿತ್ತು. ಆದರೆ ನೆಹರೂ ಅದಕ್ಕೆ ಕಿವಿಗೊಡಲಿಲ್ಲ. ಅದಕ್ಕೆ ಇತಿಹಾಸವೇ ಸಾಕ್ಷಿ ಎಂದು ನಡ್ಡಾ ದೂರಿದರು. ನೆಹರೂ ಓಲೈಕೆ ನೀತಿಯನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಮುಖರ್ಜಿ ದೂರಾಗಿದ್ದರು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next