Advertisement

Crime: ನಿರ್ಲಕ್ಷ್ಯ ತೋರಿದ ವಿವಾಹಿತ ಮಹಿಳೆಗೆ ಚಾಕು ಇರಿದು ಹತ್ಯೆ

12:57 PM Dec 12, 2023 | Team Udayavani |

ಬೆಂಗಳೂರು: ನಿರ್ಲಕ್ಷಿಸಿದ್ದ ವಿವಾಹಿತ ಮಹಿಳೆಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣ ಜಗಜೀವನ್‌ರಾಮ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಜೆಜೆ ನಗರದ ಫ‌ರ್ವೀನ್‌ ತಾಜ್‌ (33) ಕೊಲೆಯಾದ ಮಹಿಳೆ. ಕಸ್ತೂರ್‌ ಬಾ ನಗರದ ಮೊಹಮ್ಮದ್‌ ಜುನೈದ್‌ ಪರಾರಿಯಾಗಿರುವ ಆರೋಪಿ.

ಆರೋಪಿ ಮೊಹಮ್ಮದ್‌ ಜುನೈದ್‌ ತನ್ನ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆ ಹೊಂದಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು. ಪ್ರಕರಣ ಪೊಲೀಸ್‌ ಠಾಣೆವರೆಗೂ ಹೋಗಿತ್ತು. ಇಬ್ಬರಿಗೂ ಪೊಲೀಸರು ಬುದ್ಧವಾದ ಹೇಳಿ ಕಳುಹಿಸಿದ್ದರು. ಇದಾದ ಬಳಿಕ ಪತ್ನಿ  ಯಿಂದ ಜುನೈದ್‌ ಅಂತರ ಕಾಯ್ದುಕೊಂಡಿದ್ದ. ಆತನ ಪತ್ನಿ ತವರು ಮನೆ ಸೇರಿದ್ದಳು. ಈ ನಡುವೆ ಪತ್ನಿಯ ಸಂಬಂಧಿ ವಿವಾಹಿತ ಮಹಿಳೆ ಫ‌ರ್ವೀನ್‌ ತಾಜ್‌ ಆರೋಪಿಯೊಂದಿಗೆ ಆತ್ಮೀಯ ವಾಗಿದ್ದಳು. ಇತ್ತೀಚೆಗೆ ಜುನೈದ್‌ನನ್ನು ಫ‌ರ್ವಿನ್‌ ನಿರ್ಲಕ್ಷಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಜುನೈದ್‌ ಭಾನುವಾರ ರಾತ್ರಿ ಫ‌ರ್ವಿನ್‌ ಮನೆಗೆ ಹೋಗಿ ಜಗಳ ಮಾಡಿದ್ದಾನೆ.

ಇಬ್ಬರ ನಡುವಿನ ಜಗಳ ತಾರಕಕ್ಕೇರಿದಾಗ ಚೂರಿಯಿಂದ ಆಕೆಯ ದೇಹದ ಹಲವು ಭಾಗಗಳಿಗೆ ಇರಿದು ಪರಾರಿ ಯಾಗಿದ್ದ. ಇತ್ತ ಗಂಭೀರವಾಗಿ ಗಾಯಗೊಂಡ ಫ‌ರ್ವಿನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖ ಲಿಸಲು ಮುಂದಾದಾಗ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಿಸಿ ಕೊಂಡಿ ರುವ ಜೆ.ಜೆ.ನಗರ ಠಾಣೆ ಪೊಲೀಸರು ಅರೋಪಿ ಜುನೈದ್‌ಗಾಗಿ ಶೋಧ ನಡೆಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next