Advertisement
ಪೂರ್ವಭಾವಿ ಸಭೆ ವಿವಿಧ ಸಮಾಜಗಳ ಮುಖಂಡರು ಹಾಗೂ ಅಧಿಕಾರಿಗಳು ಆಗಮಿಸಿದ್ದರು. ತಹಶೀಲ್ದಾರ್ ಅವರು ಮಧ್ಯಾಹ್ನ 12.30 ಸಮಯವಾದರೂ ಆಗಮಿಸಲಿಲ್ಲ. ಅಧಿಕಾರಿಗಳ ವರ್ತನೆಯಿಂದ ರೋಸಿಹೋದ ಮುಖಂಡರಾದ ನಿಚ್ಚವ್ವನಹಳ್ಳಿ ಭೀಮಪ್ಪ, ಎಚ್.ಟಿ. ಗಿರೀಶಪ್ಪ, ತಲವಾಗಲು ಮಲ್ಲಿಕಾರ್ಜುನ್, ಬೇಲೂರು ಅಂಜಪ್ಪ ಅವರು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಗೆ ಆಗಮಿಸಿಲ್ಲ. ದಾರ್ಶನಿಕರ ಜಯಂತಿಗಳ ಆಚರಣೆಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನೀವು ಸಭೆ ನಡೆಸಿದರದೂ ಏನೂ ಪ್ರಯೋಜನವಿಲ್ಲ. ಸಭೆ ಮಂದೂಡಿ ಎಂದು ಹಲವು ಮುಖಂಡರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.
ದಸರಾ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳಿವೆ. ನಂತರ ಸಭೆ ನಡೆಸುವುದು ಕಷ್ಟವಾಗುತ್ತಿದೆ. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಕಡ್ಡಾಯವಾಗಿ ಎಲ್ಲ ಜಯಂತಿ ಹಾಗೂ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಭಾಗವಹಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅ. 23ರಂದು ಪಟ್ಟಣದ ನಟರಾಜ ಕಲಾಭವನದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಾಗೂ ಅ. 24ರಂದು ಜ್ಯೂನಿಯರ್ಕಾಲೇಜ್ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು. ಪಟ್ಟಣದ ಐಬಿ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಮೆರವಣಿಗೆ ಹಾಗೂ ಆಯಾ ಸಮಾಜದ ಪ್ರತಿಭಾವಂತ ವಿದ್ಯಾ ಕಾರಿಗಳಿಗೆ ಪ್ರತಿಭಾ ಪುರಸ್ಕಾರ
ನೀಡಲು ನಿರ್ಧರಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳಿಗೆ ಕಾರ್ಯಕ್ರಮದ ಜವಾಬ್ದಾರಿ ವಹಿಸಲಾಯಿತು. ಸಿಪಿಐ ಡಿ. ದುರುಗಪ್ಪ, ವಿವಿಧ ಸಮಾಜದ ಮುಖಂಡರಾದ ನಿಚ್ಚವ್ವನಹಳ್ಳಿ ಪರುಶುರಾಮಪ್ಪ, ಪಾಟೀಲ್ ಬೆಟ್ಟನಗೌಡ, ಶಿರಹಟ್ಟಿ ದಂಡೆಪ್ಪ, ಅರಸೀಕೆರೆ ಸುರೇಶ್, ರವಿ ಅಧಿಕಾರ್, ನೀಲಗುಂದ ಮನೋಜ್, ಲೀಲಾ ಲಿಂಗರಾಜ್, ನಾಗರಾಜ್, ಸೋಮನಾಥ್, ಸಿ.ಲೋಕ್ಯನಾಯ್ಕ, ನಾಗರಾಜ್, ಕಬ್ಬಳ್ಳಿ ಮೈಲಪ್ಪ, ಅಧಿಕಾರಿಗಳು ಉಪಸ್ಥಿತರಿದ್ದರು.