Advertisement
ಸಂಪರ್ಕ ಕಡಿತಗೊಳ್ಳುವ ಭೀತಿ ರಸ್ತೆಯ ಬದಿಯಲ್ಲಿ ಒಂದೆಡೆ ರಸ್ತೆಗೆ ವಾಲಿರುವ ಅಪಾಯಕಾರಿ ಮರಗಳಿದ್ದು ಯಾವುದೇ ಸಂದರ್ಭ ಬೀಳಬಹುದಾಗಿದೆ. ಅಲ್ಲದೆ ವಿಪರೀತ ಮಳೆಗೆ ಗುಡ್ಡಗಳು ಕುಸಿಯುತ್ತಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ಈ ಭಾಗದ ಜನರಿದ್ದಾರೆ.
ಈ ಭಾಗದ ಪ್ರದೇಶ ಗುಡ್ಡ – ಕಾಡುಗಳಿಂದ ಆವೃತವಾಗಿದ್ದು ವಿಪರೀತ ಮಳೆ ಸುರಿಯುವ ಪರಿಣಾಮ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಸ್ತೆ ಕಾಂಕ್ರೀಟೀಕರಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕನಿಷ್ಠ 2ರಿಂದ 3 ಕೋಟಿ ರೂ. ಅನುದಾನದ ಆವಶ್ಯಕತೆ ಇದೆ. ಎರಡು ಗ್ರಾಮಗಳ ಅಭಿವೃದ್ಧಿ
ಈ ರಸ್ತೆಯು ಗ್ರಾಮದ ಮುಖ್ಯ ರಸ್ತೆಯಾಗಿದ್ದು ದುರಸ್ತಿಗೊಂಡಲ್ಲಿ ಇದಕ್ಕೆ ಹೊಂದಿಕೊಂಡಿರುವ ಹಲವಾರು ಕೂಡುರಸ್ತೆಗಳ ಸಂಪರ್ಕವಾಗಿ ಆ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಾಡಾ³ಲು ಗ್ರಾಮಕ್ಕೆ ಇದೇ ಸಂಪರ್ಕ ರಸ್ತೆಯಾದ್ದರಿಂದ ರಸ್ತೆ ಅಭಿವೃದ್ಧಿಯಾದಲ್ಲಿ ನಾಡ್ಪಾಲು ಹಾಗೂ ಕಬ್ಬಿನಾಲೆ ಎರಡೂ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
Related Articles
Advertisement
ಪ್ರಸ್ತಾವನೆ ಸಲ್ಲಿಸಲಾಗಿದೆಈ ಭಾಗದ ರಸ್ತೆಯ ಡಾಮರೀಕರಣಗೊಳಿಸಲು ಈಗಾಗಲೇ ಶಾಸಕರು 25ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದೆ.
– ಜ್ಯೋತಿ ಹರೀಶ್, ಜಿ.ಪಂ. ಸದಸ್ಯರು