Advertisement

ನೆಲಮಂಗಲ: ಭುಗಿಲೆದ್ದ ಕೈ ಗುಂಪುಗಾರಿಕೆ ,ಜಯಮಾಲಾ ಕಂಗಾಲು 

02:51 PM Feb 14, 2018 | Team Udayavani |

ನೆಲಮಂಗಲ: ಕಾಂಗ್ರೆಸ್‌ ಸಭೆಯಲ್ಲಿ ಭಿನ್ನಮತ ಭುಗಿಲೆದ್ದು ತೀವ್ರ ವಾಗ್ವಾದ ನಡೆದು ಕೈ ಮಿಲಾಯಿಸಲು ಹೊರಟ ಘಟನೆ ಬುಧವಾರ ನೆಲಮಂಗಲದಲ್ಲಿ ನಡೆದಿದ್ದು, ಚುನಾವಣಾ ವೀಕ್ಷಕರಾಗಿ ಬಂದಿದ್ದ ಜಯಮಾಲ ಅವರು ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದೆ ಕಂಗಾಲಾಗಿ ಹೋದರು. 

Advertisement

ಅಭ್ಯರ್ಥಿ ಆಯ್ಕೆಗಾಗಿ ಸಭೆಗೆ ಅಗಮಿಸಿದ್ದ ಕಾಂಗ್ರೆಸ್‌ ನಾಯಕಿ,ಬೆಂಗಳೂರು ಗ್ರಾಮಾಂತರದ ವೀಕ್ಷಕಿ ಜಯಮಾಲಾ ಅವರ ಸಮ್ಮುಖದಲ್ಲಿ ಭಿನ್ನಮತ ಭುಗಿಲೆದ್ದಿದೆ. 

ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡ ಮುಖಂಡರು ಸಭೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದರು. 

ಕಾಂಗ್ರೆಸ್‌ ನಾಯಕರರಾದ ಆಂಜನಮೂರ್ತಿ ಮತ್ತು ಚೆಲುವರಾಜು ಬೆಂಬಲಿಗರೊಂದಿಗೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿದೆ. 

ಜಯಮಾಲಾ ಅವರು ಘಟನೆಯ ಕುರಿತು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next