Advertisement

ಗಣಿತ ವಿರೋಧಿ ಮನಸ್ಥಿತಿ ತೊಲಗಲಿ: Rishi Sunak

01:40 AM Apr 18, 2023 | Team Udayavani |

ಲಂಡನ್‌: ಗಣಿತವನ್ನು ಕಬ್ಬಿಣದ ಕಡಲೆ ಎನ್ನುವಂತೆ ಭಾವಿಸುವ ಗಣಿತ ವಿರೋಧಿ ಮನಸ್ಥಿತಿ ಬದಲಾಗಬೇಕಿದೆ. ಬ್ರಿಟನ್‌ನಲ್ಲಿ ಗಣಿತ ಸಾಕ್ಷರತೆಯ ಸಂಖ್ಯೆ ಹೆಚ್ಚಿಸುವುದಾಗಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪ್ರತಿಜ್ಞೆ ಮಾಡಿದ್ದಾರೆ.

Advertisement

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿಷಿ, ಗಣಿತ ಎನ್ನುತ್ತಿದ್ದಂತೆ ಜನರು ಇದು ನಮ್ಮ ವಿಷಯವೇ ಅಲ್ಲವೆನ್ನುತ್ತಾರೆ. ಅದು ಎಂದಿಗೂ ಬಿಡಿಸಲಾಗದ ಸಮಸ್ಯೆ ಎನ್ನುವಂಥ ಜೋಕ್‌ಗಳನ್ನೂ ಮಾಡುತ್ತಾರೆ.

ಇದಕ್ಕಾಗಿ ನಮ್ಮ ಸರಕಾರ ವಿಶೇಷ ಸಮಿತಿಯನ್ನು ರಚಿಸಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಗಣಿತ ಕಲಿಸುವ, ಇಷ್ಟಪಟ್ಟು ಈ ವಿಚಾರವನ್ನು ಅರ್ಥೈಸಿಕೊಳ್ಳಲು ಬೇಕಿರುವ ಎಲ್ಲ ಸಲಹೆಗಳನ್ನೂ ಸಮಿತಿ ನೀಡಲಿದೆ. ಈ ಮೂಲಕ ದೇಶದಲ್ಲಿ ಗಣಿತ ಸಾಕ್ಷರತೆ ಮಟ್ಟ ಹೆಚ್ಚಿಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next