Advertisement

ಮೆಕ್ಕಾ ಸಮೀಪ ಅಪಘಾತ; ಯಾತ್ರೆಗೆ ತೆರಳಿದ್ದ ರಾಯಚೂರಿನ ನಾಲ್ವರ ಮೃತ್ಯು

10:28 PM Feb 22, 2023 | Team Udayavani |

ರಾಯಚೂರು: ಮುಸ್ಲಿಮರ ಪವಿತ್ರ ಕ್ಷೇತ್ರಕ್ಕೆ ತೆರಳಿದ್ದ ಕುಟುಂಬದ ನಾಲ್ವರು ಮದೀನಾ ಸಮೀಪ ರಸ್ತೆ ಅಪಘಾತದಲ್ಲಿ ಮೃತ್ಯು ಹೊಂದಿದ ದಾರುಣ ಘಟನೆ ನಡೆದಿದೆ.

Advertisement

ಟೂರಿಸ್ಟ್ ಬಸ್  ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಗೆ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಕಳೆದ ಫೆ.8 ರಂದು ಹೈದ್ರಾಬಾದ್ ನಿಂದ ಪವಿತ್ರ ಕ್ಷೇತ್ರ ಮೆಕ್ಕಾ ಗೆ ತೆರಳಿದ್ದರು.‌ಮೆಕ್ಕಾ ದರ್ಶನ ಮುಗಿಸಿ ಮದೀನಾಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.

ಈ ರಸ್ತೆ ಅಪಘಾತದಲ್ಲಿ ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳ ಆಪ್ತ‌ಕಾರ್ಯದರ್ಶಿ ಶಫೀವುಲ್ಲಾ ಸುಳ್ಳದ್ (52) ಅವರ ತಾಯಿ ಬೀಬಿಜಾನ್ ಸುಳ್ಳದ್ ( 70), ಶಫೀವುಲ್ಲಾ ಪತ್ನಿ ಸೀರಾಜ್ ಬೇಗಂ ( 46) ಪುತ್ರಿ ಶೀಫಾ (23) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದುರ್ಘಟನೆಯಲ್ಲಿ ಶಫೀವುಲ್ಲಾ ಪುತ್ರ ಸಮೀರ್ ಬದುಕುಳಿದಿದ್ದು ತೀವ್ರ ಗಾಯಗೊಂಡಿರುವ ಅವರನ್ನು ಮದೀನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೃತ ಶಫೀವುಲ್ಲಾ ಸಹೋದರ ಕುಷ್ಟಗಿಯ ನಿವಾಸಿ ಅಬ್ದುಲ್ ರಝಾಕ್ ಸುಳ್ಳದ್ ಮಾಹಿತಿ ನೀಡಿದ್ದಾರೆ. ಮೃತ ಶಫೀವುಲ್ಲಾ ಪತ್ನಿ ಸೀರಾಜ್ ಬೇಗಂ ಕುಷ್ಟಗಿ ಪಟ್ಟಣದ ದಿವಂಗತ ನಿವೃತ್ತ ತಹಶೀಲ್ದಾರ್ ತಾಜುದ್ದೀನ್ ಅವರ ಸಹೋದರಿ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next