Advertisement

ಇರಾನ್ ನಲ್ಲಿ ಸಿಲುಕಿದ್ದ 200ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಕರೆತಂದ ಏರ್ ಇಂಡಿಯಾ ವಿಮಾನ

12:10 AM Mar 21, 2020 | Mithun PG |

ನವದೆಹಲಿ: ಕೊರೊನಾ ತನ್ನ ಕಬಂಧಬಾಹುವವನ್ನು ಚಾಚುತ್ತಿರುವ ಹಿನ್ನಲೆಯಲ್ಲಿ 131 ವಿದ್ಯಾರ್ಥಿಗಳು ಸೇರಿದಂತೆ 234 ಜನರನ್ನು ವಿಶೇಷ ಏರ್ ಇಂಡಿಯಾ ವಿಮಾನ ಮೂಲಕ ಇಟಲಿಯಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಕೊರೊನಾ ವೈರಸ್ ಕಂಟಕದಿಂದ ಇಟಲಿ ಎಲ್ಲಾ ವಿದೇಶಗಳಿಗೆ ವಿಮಾನ ಸೇವೆಗಳನ್ನು ರದ್ದುಗೊಳಿಸಿತ್ತು.
ಇಟಲಿಯಿಂದ ಬಂದ ವಿದ್ಯಾರ್ಥಿಗಳು ಸೇರಿದಂತೆ ಇತರ ವ್ಯಕ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗಿದ್ದು, ಇವರನ್ನು ರಾಜಸ್ಥಾನದ ಜೈಸಲ್ಮೇರ್  ನಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಪರೀಕ್ಷಿಸಲಾಗುತ್ತದೆ.

Advertisement

ಸುರಕ್ಷಿತವಾಗಿ ಭಾರತಿಯರನ್ನು ಕರೆತರಲು ಕಾರಣಕರ್ತರಾದ ಇರಾನ್ ಅಧಿಕಾರಿಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಧನ್ಯವಾದ ಅರ್ಪಿಸಿದ್ದಾರೆ.ಕೊರೊನಾ ವೈರಸ್ ಮಹಾಮಾರಿಯಿಂದ ಈಗಾಗಲೇ ಇರಾನ್ ನಲ್ಲಿ 611 ಜನರು ಮೃತಪಟ್ಟಿದ್ದು, 12 ಸಾವಿರಕ್ಕೂ ಹೆಚ್ಚು ಜನರಿಗಗೆ ಸೋಂಕು ತಗುಲಿದೆ.  ಶನಿವಾರ ಒಂದೇ ದಿನ ಈ ವೈರಸ್ ಗೆ 97 ಜನರು ಬಲಿಯಾಗಿದ್ದರು.

ಕಳೆದ ಕೆಲವು ದಿನಗಳ ಹಿಂದೆ ಕೂಡ ಏರ್ ಇಂಡಿಯಾ ವಿಮಾನ ಹಲವು ಭಾರತೀಯರನ್ನು ಇರಾನ್ ನಿಂದ ಸುರಕ್ಷಿತವಾಗಿ ಕರೆತಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next