Advertisement

ವಿಪಕ್ಷಕ್ಕಾಗಿ ಕಾಂಗ್ರೆಸ್‌ನಲ್ಲಿ ಎನ್‌ಸಿಪಿ ವಿಲೀನ?

12:58 AM May 31, 2019 | Lakshmi GovindaRaj |

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ನವದೆಹಲಿಯಲ್ಲಿ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ರನ್ನು ಭೇಟಿ ಮಾಡಿದ್ದು, ಲೋಕಸಭೆಯಲ್ಲಿ ವಿಪಕ್ಷ ಸ್ಥಾನಮಾನ ಗಳಿಸುವ ಉದ್ದೇಶಕ್ಕೆ ಎನ್‌ಸಿಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

Advertisement

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಪಕ್ಷದ ಅಧ್ಯಕ್ಷ ಹುದ್ದೆ ತೊರೆಯುತ್ತೇನೆ ಎಂದು ಪಟ್ಟು ಹಿಡಿದಿದ್ದ ರಾಹುಲ್‌, ಪಕ್ಷದ ಯಾವ ಮುಖಂಡರನ್ನೂ ಭೇಟಿ ಮಾಡುತ್ತಿರಲಿಲ್ಲ. ಆದರೆ ಗುರುವಾರ ಸ್ವತಃ ಶರದ್‌ ಪವಾರ್‌ ಮನೆಗೆ ತೆರಳಿದ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಸದ್ಯ ಕಾಂಗ್ರೆಸ್‌ 52 ಸದಸ್ಯ ಬಲವನ್ನು ಲೋಕಸಭೆಯಲ್ಲಿ ಹೊಂದಿದೆ. ಆದರೆ ವಿಪಕ್ಷ ಸ್ಥಾನಮಾನ ಪಡೆಯಲು 55 ಸದಸ್ಯ ಬಲ ಅಗತ್ಯವಿದೆ. ಎನ್‌ಸಿಪಿ 5 ಸದಸ್ಯರನ್ನು ಹೊಂದಿದ್ದು, ಎನ್‌ಸಿಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದಲ್ಲಿ ವಿಪಕ್ಷ ಸ್ಥಾನಮಾನ ಪಡೆಯಬಹುದು.

ಮೂಲ ಕಾಂಗ್ರೆಸ್ಸಿಗರೇ ಆಗಿದ್ದ ಪವಾರ್‌, 1999 ರಲ್ಲಿ ಕಾಂಗ್ರೆಸ್‌ನಿಂದ ಹೊರಬಿದ್ದು ಎನ್‌ಸಿಪಿ ಸ್ಥಾಪಿಸಿಕೊಂಡಿದ್ದರು. ಫ‌ಲಿತಾಂಶ ಹೊರಬೀಳು ವುದಕ್ಕೂ ಮುನ್ನ ವಿವಿಧ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿ ಸುವಲ್ಲಿ ಪವಾರ್‌ ಪ್ರಮುಖ ಪಾತ್ರವನ್ನೂ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next