Advertisement

ನವಬೃಂದಾವನ ಗಡ್ಡಿ: ಶ್ರೀಪಧ್ಮನಾಭ ತೀರ್ಥರ ಆರಾಧನೆಗೆ ಚಾಲನೆ

02:29 PM Dec 12, 2020 | sudhir |

ಗಂಗಾವತಿ : ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ಶ್ರೀ ಪದ್ಮನಾಭ ತೀರ್ಥರ ಪೂರ್ವರಾಧನೆಯನ್ನು ಮಂತ್ರಾಲಯದ ಮಠದಿಂದ ನೆರವೇರಿಸಲಾಯಿತು.

Advertisement

ಹೈಕೋರ್ಟ್ ಆದೇಶದಂತೆ ಮಂತ್ರಾಲಯ ಮಠದಿಂದ ಶನಿವಾರ ಬೆಳಿಗ್ಗೆ 5 ಗಂಟೆಗೆ ವೃಂದಾವನಕ್ಕೆ ಪಂಚಾಮೃತಾಭಿಷೇಕ ,ವಿಶೇಷ ಹೂವಿನಅಲಂಕಾರ ,ಅಲಂಕಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಭಾನುವಾರ ಮಧ್ಯಾರಾಧನೆ ಬೆಳಿಗ್ಗೆ 12.30 ರವರಿಗೆ ಜರುಗಲಿದೆ. ಡಿ.13ರಂದು ಮಧ್ಯಾರಾಧನೆಯಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಸುಭುದೇಂದ್ರತೀರ್ಥ ಶ್ರೀಗಳು ಪಾಲ್ಗೊಳ್ಳಲಿದ್ದಾರೆ‌.

ಇದನ್ನೂ ಓದಿ:ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು : ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಈ ಸಂದರ್ಭದಲ್ಲಿ ದಿವಾನ ರಾಜಾ ಸುಧೀಂದ್ರ ಚಾರ್,ಮಠಾಧಿಕಾರಿಗಳಾದ ಭೀಮಸೇನಚಾರ,ಪುಷ್ಕರಚಾರ, ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ವಿಜಯಚಾರ ಚಳ್ಳಾರಿ, ರಾಮಕೃಷ್ಣ ಜಾಹಗಿರದಾರ,ವಿಜಯ ಡಣಾಪುರ ಸೇರಿದಂತೆ ಮಠದ ಸಿಬ್ಬಂದಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next