Advertisement
ಈ ವೇಳೆ, ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ಪಾಕ್ ಸೇನೆಯ ವಶದಲ್ಲಿದ್ದು ಮರಳಿರುವಂಥ ವೀರ ಯೋಧ ಅಭಿನಂದನ್ ಅವರು ತಮಿಳುನಾಡಿನವರಾಗಿದ್ದು, ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಸಮರವನ್ನು ಅನುಮಾನದಿಂದ ನೋಡುತ್ತಿರುವ ಪ್ರತಿಪಕ್ಷಗಳ ವಿರುದ್ಧವೂ ಅವರು ವಾಗ್ಧಾಳಿ ನಡೆಸಿದ್ದಾರೆ. ಇಡೀ ದೇಶವೇ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ನಿಂತಿದ್ದರೆ, ಅವರು ಮಾತ್ರ ಸಶಸ್ತ್ರ ಪಡೆಗಳನ್ನೇ ಅನುಮಾನದಿಂದ ನೋಡುತ್ತಾರೆ. ಅವರು ನಮ್ಮ ಸೇನಾಪಡೆಯನ್ನು ನಂಬುತ್ತಾರೋ ಅಥವಾ ತಮ್ಮ ನೆಲದಲ್ಲಿ ಉಗ್ರವಾದವನ್ನು ಪೋಷಿಸುವಂಥ ಶಕ್ತಿಗಳನ್ನು ನಂಬುತ್ತಾರೋ ಎಂಬುದನ್ನು ಸ್ಪಷ್ಟಪಡಿಸಬೇಕು. ಕೆಲವು ರಾಜಕೀಯ ಪಕ್ಷಗಳ ಈ ನಡೆಯು ಪಾಕಿಸ್ತಾನಕ್ಕೆ ವರದಾನವಾಗಿದೆ ಎಂದೂ ಮೋದಿ ಆರೋಪಿಸಿದ್ದಾರೆ. ಮೋದಿ ಬರುತ್ತಾರೆ, ಹೋಗುತ್ತಾರೆ. ಆದರೆ, ಭಾರತವು ಉಳಿಯುತ್ತದೆ ಎಂಬುದನ್ನೂ ಅವರು ಪುನರುಚ್ಚರಿಸಿದ್ದಾರೆ.
Advertisement
ಉಗ್ರರಿಗೆ “ಬಡ್ಡಿ’ಸಮೇತ ವಾಪಸ್ ನೀಡುತ್ತೇವೆ
12:30 AM Mar 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.