Advertisement

ರಾಷ್ಟ್ರಪತಿ ಆಡಳಿತ ಹೇರಿಕೆಯ ಬಳಿಕವೂ ಶಿವಸೇನೆಗೆ ಸರಕಾರ ರಚನೆ ಆಸೆ ಜೀವಂತ

09:35 AM Nov 13, 2019 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ರಾಜ್ಯಪಾಲರು ನಿಗದಿಪಡಿಸಿದ ಕಾಲಾವಧಿಯಲ್ಲಿ ಸರಕಾರ ರಚನೆಗೆ ಹಕ್ಕುಮಂಡಿಸಲು ಶಿವಸೇನೆ ಮತ್ತು ಎನ್.ಸಿ.ಪಿ. ವಿಫಲವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಂಡಿದೆ.

Advertisement

ರಾಜ್ಯಪಾಲರ ಈ ಕ್ರಮಕ್ಕೆ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಈ ನಿರ್ಣಯದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದೆ. ಈ ನಡುವೆ ಶಿವಸೇನೆಗೆ ಸರಕಾರ ರಚಿಸಲು ಬೆಂಬಲ ನೀಡುವ ಕುರಿತಾಗಿ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಮತ್ತೆ ಆಸಕ್ತಿ ತೋರಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಈ ಮೈತ್ರಿ ಪಕ್ಷಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಶಿವಸೇನೆಗೆ ಬೆಂಬಲ ನೀಡುವ ಕುರಿತಾಗಿ ನಮ್ಮ ಮಾತುಕತೆ ಸಾಗಿದೆ ಎಂದು ತಿಳಿಸಿದೆ.

ಇತ್ತ ಶಿವಸೇನೆಯ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರೂ ಸಹ ಮಾಧ್ಯಗಳೊಂದಿಗೆ ಮಾತನಾಡಿ, ‘ಎನ್.ಸಿ.ಪಿ. – ಕಾಂಗ್ರೆಸ್ ಮತ್ತು ನಮ್ಮ ಸಿದ್ಧಾಂತಗಳ ನಡುವೆ ವೈರುಧ್ಯಗಳಿದ್ದರೂ ಮಹಾರಾಷ್ಟ್ರದಲ್ಲಿ ಸುಭದ್ರ ಸರಕಾರ ನೀಡುವ ನಿಟ್ಟಿನಲ್ಲಿ ನಮ್ಮ ನಡುವೆ ಪ್ರಯತ್ನಗಳು ಸಾಗಿವೆ’ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಸರಕಾರ ರಚನೆಯ ಪ್ರಕ್ರಿಯೆ ಜೀವಂತವಾಗಿದೆ ಎಂಬ ಸೂಚನೆಯನ್ನು ಉದ್ಭವ್ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next