Advertisement

ರಾಷ್ಟ್ರೀಯ ಹೆದ್ದಾರಿ ಶೋಚನೀಯಾವಸ್ಥೆ

07:06 PM Sep 06, 2019 | mahesh |

ಕಾಸರಗೋಡು: ಬೃಹತ್‌ ಹೊಂಡಗಳು ಸೃಷ್ಟಿಯಾಗಿ ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾಗದ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳದ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಯುಡಿಎಫ್‌ ಸಮಿತಿ ನೇತೃತ್ವದಲ್ಲಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಲಾಯಿತು.

Advertisement

ಶಾಸಕ ಎನ್‌.ಎ.ನೆಲ್ಲಿಕುನ್ನು ಸಹಿತ ಯುಡಿಎಫ್‌ ಜನಪ್ರತಿನಿಧಿಗಳು, ಕಾರ್ಯಕರ್ತರು ಸಹಿತ ನೂರಾರು ಮಂದಿ ಭಾಗವಹಿಸಿದರು. ಮುಸ್ಲಿಂ ಲೀಗ್‌ ರಾಜ್ಯ ಕೋಶಾಧಿಕಾರಿ ಸಿ.ಟಿ.ಅಹಮ್ಮದಲಿ ಉದ್ಘಾಟಿಸಿದರು. ಚೆಯರ್‌ವೆುàನ್‌ ಎ.ಎಂ.ಕಡವತ್‌ ಅಧ್ಯಕ್ಷತೆ ವಹಿಸಿದರು. ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌, ನೇತಾರರಾದ ಎ.ಅಬ್ದುಲ್‌ ರಹಿಮಾನ್‌, ಟಿ.ಇ.ಅಬ್ದುಲ್ಲ, ಎಂ.ಎಚ್‌.ಜನಾರ್ದನ, ಕರಿವೆಳ್ಳೂರು ವಿಜಯನ್‌, ಅಶ್ರಫ್‌ ಎಡನೀರು, ಪಿ.ಎಂ.ಮುನೀರ್‌ ಹಾಜಿ, ಅಬ್ದುಲ್ಲ ಕುಂಞಿ, ಆರ್‌.ಗಂಗಾಧರನ್‌, ಕೆ.ಖಾಲಿದ್‌, ಸಿ.ಬಿ.ಅಬ್ದುಲ್ಲ, ಹಾಜಿ ಹಾಶಿಂ ಕಡವತ್ತ್ ಮೊದಲಾದವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯನ್ನು ತುರ್ತಾಗಿ ದುರಸ್ತಿಗೊಳಿಸದಿದ್ದರೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವುದಾಗಿ ನೇತಾರರು ಮುನ್ನೆಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next