Advertisement

ಸಿಎಂ ಬರುತ್ತಾರೆಂದು ತರಾತುರಿಯಲ್ಲಿ ಹೊಂಡ ಮುಚ್ಚಿದರು!

09:38 AM Aug 13, 2019 | Hari Prasad |

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನಲ್ಲಿ ಮಳೆಗಾಲ ಪ್ರಾರಂಭದಲ್ಲೇ ಹೆದ್ದಾರಿಯಲ್ಲಿ ಹೊಂಡ ಕಾಣಿಸಿಕೊಂಡಿದ್ದರೂ, ಹೊಂಡ ಮುಚ್ಚಿರಲಿಲ್ಲ. ಆದರೆ ಸಿಎಂ ಯಡಿಯೂರಪ್ಪ ಅವರು ಆಗಮಿಸುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಹೊಂಡ ಮುಚ್ಚಲು ಮುಂದಾಗಿದ್ದಾರೆ.

Advertisement

ಸೋಮವಾರ ಯಡಿಯೂರಪ್ಪ ಮಂಗಳೂರಿನಿಂದ ಬೆಳ್ತಂಗಡಿ ತೆರಳಿದ್ದು, ಇದಕ್ಕೂ ಮುನ್ನ ಮತ್ತು ಅವರ ತೆರಳಿದ ಮೇಲೆ ಎನ್‌.ಎಚ್‌.ಎ.ಐ.ನವರು ಹೆದ್ದಾರಿಯ ಹೊಂಡಗಳಿಗೆ ಜಲ್ಲಿ ಹುಡಿಗಳನ್ನು ಹಾಕುವ ಕಾರ್ಯ ಮಾಡಿದ್ದಾರೆ.ಇದಕ್ಕೂ ಮೊದಲು ಸಾರ್ವಜನಿಕರು ಹೊಂಡ ಮುಚ್ಚುವುದಕ್ಕೆ ಆಗ್ರಹಿಸಿದರೂ, ಹೊಂಡ ಮುಚ್ಚುವ ಕಾರ್ಯ ನಡೆದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next