Advertisement

ಹೆರಾಲ್ಡ್‌: ಸ್ವಾಮಿ, ರಾಹುಲ್‌ ವಾಗ್ವಾದ

06:00 AM May 06, 2018 | Team Udayavani |

ಹೊಸದಿಲ್ಲಿ: ನ್ಯಾಷನಲ್‌ ಹೆರಾಲ್ಡ್‌ ವಂಚನೆ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ವಿಳಂಬ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ.

Advertisement

 ಸ್ವಾಮಿ ಕೋರ್ಟ್‌ಗೆ ಕೆಲ ದಾಖಲೆಗಳನ್ನು  ಸಲ್ಲಿಸಿದ್ದು, ಇವು ನಿಜವಾದದ್ದೇ, ಅಲ್ಲವೇ ಎಂದು ರಾಹುಲ್‌, ಸೋನಿಯಾ ಖಚಿತಪಡಿಸಬೇಕು. ಆರೋಪಿ ದಾಖಲೆಗಳನ್ನು ತಿರಸ್ಕರಿಸದೇ ಅಥವಾ ಸಮ್ಮತಿಸದೇ ಸಮಯ ವ್ಯರ್ಥ ಮಾಡಬಾರದು ಎಂದು ಆಗ್ರಹಿಸಿದ ರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌ ಪರ ವಕೀಲರು, ಅನಧಿಕೃತ ದಾಖಲೆಗಳನ್ನು ಸಲ್ಲಿಸುವ ಮೂಲಕ ವಿಚಾರಣೆಯನ್ನು ಸ್ವಾಮಿ ವಿಳಂಬಗೊಳಿಸುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next