Advertisement

ಗಂಗಾನದಿ ದಡದ 500 ಮೀಟರ್ ಒಳಗೆ ಕಸ ಸುರಿದ್ರೆ 50 ಸಾವಿರ ದಂಡ; NGT

02:57 PM Jul 13, 2017 | Team Udayavani |

ನವದೆಹಲಿ:ಹಿಂದೂಗಳ ಪವಿತ್ರ ಗಂಗಾನದಿ ದಡದಿಂದ 500 ಮೀಟರ್ ಒಳಗೆ ಕಸ ಸುರಿಯುವುದನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರು ಪೀಠ (ಎನ್ ಜಿಟಿ), ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ಯಾವುದೇ ವಿಧದ ಕಸವನ್ನು ಸುರಿದರೆ 50 ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂದು ಗುರುವಾರ ಆದೇಶ ನೀಡಿದೆ.

Advertisement

ಉನ್ನಾವೋ ಮತ್ತು ಹರಿದ್ವಾರದಲ್ಲಿನ ಗಂಗಾನದಿಯ ದಡದಿಂದ 500 ಮೀಟರ್ ವ್ಯಾಪ್ತಿವರೆಗೆ ಕಸ ಎಸೆಯಲು ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಜಸ್ಟೀಸ್ ಸ್ವತಂತ್ರ ಕುಮಾರ್ ನೇತೃತ್ವದ ಎನ್ ಜಿಟಿ ಪೀಠ ನಿರ್ದೇಶನ ಕೊಟ್ಟಿದೆ.

ಅಷ್ಟೇ ಅಲ್ಲ ಗಂಗಾನದಿಯ ದಡದಿಂದ 100 ಮೀಟರ್ ವ್ಯಾಪ್ತಿಯನ್ನು ಅಭಿವೃದ್ಧಿ ರಹಿತ ವಲಯ ಎಂಬುದಾಗಿ ಘೋಷಿಸಬೇಕು ಎಂದು ಎನ್ ಜಿಟಿ ತಿಳಿಸಿದೆ.

ಈ ಆದೇಶದ ಅನ್ವಯ ಉನ್ನಾವೋ ಮತ್ತು ಹರಿದ್ವಾರದ ಗಂಗಾನದಿ ಪರಿಸರದ ನಡುವೆ ಕಸ ಸುರಿಯುವ ವ್ಯಕ್ತಿಗಳು 50 ಸಾವಿರ ರೂಪಾಯಿ ದಂಡ ಕಟ್ಟಬೇಕಾಗಲಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next