Advertisement

ದೇಶಕಂಡ ಶ್ರೇಷ್ಠ ರಾಜಕಾರಣಿ: ಶ್ರೀನಿವಾಸ್‌ಪ್ರಸಾದ್‌

11:20 AM Aug 17, 2018 | Team Udayavani |

ಮೈಸೂರು: ಅಟಲ್‌ ಬಿಹಾರಿ ವಾಜಪೇಯಿ ದೇಶಕಂಡ ಶ್ರೇಷ್ಠ ರಾಜಕಾರಣಿ. ಇಡೀ ಸಂಸತ್ತು ಸಾರ್ಥಕವಾಯಿತು ಎನ್ನುವ ರೀತಿಯಲ್ಲಿ ರಾಜಕಾರಣ  ಮಾಡಿದವರು ಎಂದು ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಕಂಬನಿ ಮಿಡಿದಿದ್ದಾರೆ. 

Advertisement

ನೆಹರೂ ಅವರಂತಹ ಹಿರಿಯರೇ ವಾಜಪೇಯಿ ಅವರ ಮಾತುಗಳನ್ನು ಮೆಚ್ಚಿಕೊಂಡಿದ್ದರು. ವಾಜಪೇಯಿ ಅವರು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ಅವರೊಂದಿಗೆ ನಾನು  ಸಮಿತಿಯ ಸದಸ್ಯನಾಗಿ ಕೆಲಸ ಮಾಡಿದ್ದೆ.

ಅವರು ಪ್ರಧಾನಿಯಾದಾಗ ಅವರ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ  ಸಚಿವನಾಗಿ ಕೆಲಸ ಮಾಡುವ ಅವಕಾಶ ದೊರೆತಿತ್ತು. ಫಾರೂಕ್‌ ಅಬ್ದುಲ್ಲಾ, ಮಮತಾ ಬ್ಯಾನರ್ಜಿ ಸೇರಿದಂತೆ 27 ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಆಡಳಿತ ನಡೆಸುವುದು ಸುಲಭದ ಮಾತಲ್ಲ.

ಆದರೆ, ವಿಶಿಷ್ಟ ವ್ಯಕ್ತಿತ್ವದ ವಾಜಪೇಯಿ ಉತ್ತಮ ಆಡಳಿತ ನಡೆಸಿದ್ದರು. ನಾನು ಅವರೊಂದಿಗೆ  ನಿಕಟ ಸಂಪರ್ಕ ಹೊಂದಿದ್ದೆ. ಅವರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಿದ್ದೇನೆ. ವಾಜಪೇಯಿ ಅವರಿಗೆ ಜಿಲೇಬಿ ಎಂದರೆ ಬಹಳ  ಇಷ್ಟ. ಅವರನ್ನು ಕಳೆದುಕೊಂಡು ದೇಶವೇ ಶೋಕಸಾಗರದಲ್ಲಿ ಮುಳುಗಿದೆ ಎಂದು ಸಂತಾಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next