Advertisement

ಮೋದಿಗೆ ಸಿಗದಷ್ಟು ಪ್ರಚಾರ ಮಂಡ್ಯ ವಿರೋಧಿ ಅಭ್ಯರ್ಥಿಗೆ’

11:14 AM Apr 19, 2019 | Team Udayavani |

ಚನ್ನಮ್ಮ ಕಿತ್ತೂರ: “ದೇಶದಲ್ಲಿ ಪ್ರಧಾನಿ ಮೋದಿಗೆ ಸಿಗದಷ್ಟು ಪ್ರಚಾರ ಮಂಡ್ಯದಲ್ಲಿ ನಮ್ಮ ವಿರೋಧಿ ಅಭ್ಯರ್ಥಿಗೆ ದೃಶ್ಯ ಮಾಧ್ಯಮಗಳು ನೀಡಿದವು. ದೃಶ್ಯ ಮಾಧ್ಯಮದವರೇ ನನ್ನ ವಿರೋ ಧಿಗಳು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

Advertisement

ಸಮೀಪದ ಎಂ ಕೆ ಹುಬ್ಬಳ್ಳಿಗೆ ಗುರುವಾರ ಸಂಜೆ ಮೈತ್ರಿ ಪಕ್ಷಗಳ ಅಭ್ಯರ್ಥಿ ಆನಂದ ಅಸ್ನೋಟಿಕರ ಅವರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಕಿತ್ತೂರಿನಲ್ಲಿರುವ ಹೆಲಿಪ್ಯಾಡ್‌ನ‌ಲ್ಲಿ ಪತ್ರಕರ್ತರೊಡನೆ ಮಾತನಾಡಿ, “ಇದರಲ್ಲಿ ಮುದ್ರಣ ಮಾಧ್ಯಮದವರ ಪಾತ್ರವಿಲ್ಲ’ ಎಂದು ಸಮಜಾಯಿಷಿ ನೀಡಿದರು.

ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next