Advertisement

ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟ: ತ್ರಿವೇಣಿ ಎಂದು ಮೋದಿ ಬಣ್ಣನೆ

12:47 AM Mar 03, 2023 | Team Udayavani |

ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟವನ್ನು ಪ್ರಧಾನಿ ನರೇಂದ್ರ ಮೋದಿಯವರು, ಬಿಜೆಪಿ ಸರಕಾರಗಳ ಸಾಧನೆ, ತಮ್ಮ ಕಾರ್ಯವೈಖರಿ ಮತ್ತು ಪಕ್ಷದ ಕಾರ್ಯಕರ್ತರ ಬದ್ಧತೆಯ “ತ್ರಿವೇಣಿ’ ಎಂದು ಬಣ್ಣಿಸಿದ್ದಾರೆ.

Advertisement

ತ್ರಿಪುರಾ, ನಾಗಾಲ್ಯಾಂಡ್‌ ಮತ್ತು ಮೇಘಾಲಯ ಅಸೆಂಬ್ಲಿ ಚುನಾವಣೆಗಳ ಫ‌ಲಿತಾಂಶದ ಹಿನ್ನೆಲೆಯಲ್ಲಿ ದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗುರುವಾರ ಸಂಜೆ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಫ‌ಲಿತಾಂಶಗಳು ಪ್ರಜಾಸತ್ತೆ ಮತ್ತು ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಜನರ ನಂಬಿಕೆಯನ್ನು ತೋರಿಸಿದೆ. ಈಶಾನ್ಯ ರಾಜ್ಯಗಳ ಚುನಾವಣೆಗೆ ಈಗ ಎಷ್ಟು ಮಹತ್ವ ದೊರೆತಿದೆ ಎಂದರೆ, ಈ ಪ್ರದೇಶವು ದಿಲ್ಲಿಯಿಂದಲೂ ದೂರವಿಲ್ಲ, ದಿಲ್‌(ಹೃದಯ)ದಿಂದಲೂ ದೂರವಿಲ್ಲ ಎಂಬುದು ಸಾಬೀತಾಗಿದೆ’ ಎಂದಿದ್ದಾರೆ.

ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈಶಾನ್ಯ ರಾಜ್ಯಗಳಲ್ಲಿ ಪಕ್ಷದ ಯಶಸ್ಸಿನ ಕ್ರೆಡಿಟ್‌ ಅನ್ನು ಪ್ರಧಾನಿ ಮೋದಿಯವರಿಗೆ ನೀಡಿದ್ದಾರೆ. ಕಾಂಗ್ರೆಸ್‌ ಈಶಾನ್ಯವನ್ನು ಎಟಿಎಂ ರೀತಿ ಬಳಸಿಕೊಂಡಿತು. ಆದರೆ, ಬಿಜೆಪಿ ಈ ಭಾಗವನ್ನು ಭ್ರಷ್ಟಾಚಾರಮುಕ್ತ ಮಾಡಿ, ಶಾಂತಿ, ಅಭಿವೃದ್ಧಿ ನೆಲೆಸುವಂತೆ ಮಾಡಿತು ಎಂದೂ ನಡ್ಡಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next