Advertisement

ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್‌ನ ಮಂತ್ರ: ಮೋದಿ

08:48 AM Apr 25, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಅವರ ಪಿತ್ರಾರ್ಜಿತ ಆಸ್ತಿ ತೆರಿಗೆ ಹೇಳಿಕೆ ವಿರುದ್ಧ ಕೆಂಡ ಕಾರಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ನೀವು ಬದುಕಿದ್ದಾಗ ಕಾಂಗ್ರೆಸ್‌ ತೆರಿಗೆ ವಸೂಲಿ ಮಾಡಲಿದೆ. ಸತ್ತ ಮೇಲೂ ಪಿತ್ರಾರ್ಜಿತ ತೆರಿಗೆ ಭಾರವನ್ನು ನಿಮ್ಮ ಮೇಲೆ ಹಾಕಲಿದೆ. ಕಾಂಗ್ರೆಸ್‌ ನಿಮ್ಮ ಆಸ್ತಿ ಮತ್ತು ನಿಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಲಿದೆ’ ಎಂದು ಪ್ರಧಾನಿ ಮೋದಿ ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ ಚುನಾವಣ ರ್ಯಾಲಿಗಳಲ್ಲಿ ಹೇಳಿದ್ದಾರೆ. ಇದರ ಜತೆಗೆ ಬದುಕಿದ್ದಾಗಲೂ ಮತ್ತು ಸತ್ತ ಮೇಲೂ ಜನರನ್ನು ಲೂಟಿ ಮಾಡುವುದೇ ಕಾಂಗ್ರೆಸ್‌ನ ಮಂತ್ರವಾಗಿದೆ’ ಎಂದೂ ದೂರಿದ್ದಾರೆ.

Advertisement

“ಕಾಂಗ್ರೆಸ್‌ನ ರಹಸ್ಯ ಕಾರ್ಯಸೂಚಿಗಳು ಈಗ ಹೊರ ಬರುತ್ತಿವೆ. ದೇಶದ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ತೆಗೆದು ಹಾಕಿದ ಪಕ್ಷವು ಈಗ ಕಾನೂನುಬದ್ಧವಾಗಿ ಜನರ ಪಿತ್ರಾರ್ಜಿತ ಆಸ್ತಿಯನ್ನು ದರೋಡೆ ಮಾಡುವ ಹುನ್ನಾರವನ್ನು ನಡೆಸಿದೆ. ಶಾಹಿ ಪರಿವಾರ(ರಾಜ ಕುಟುಂಬ) ಶೆಹಜಾದಾ(ರಾಹುಲ್‌ ಗಾಂಧಿ) ಅವರ ಸಲಹೆಗಾರ (ಸ್ಯಾಮ್‌ ಪಿತ್ರೋಡಾ) ಮಧ್ಯಮ ವರ್ಗದವರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಬಗ್ಗೆ ಹೇಳುತ್ತಿದ್ದಾರೆ’ ಎಂದು ಮೋದಿ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರಲ್ಲದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಸೇರಿದಂತೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next