Advertisement

ನರೇಂದ್ರ ಮೋದಿ ಸಾಧನೆಯಿಂದ ಬಲಿಷ್ಠ ಭಾರತ

10:30 AM Apr 09, 2019 | pallavi |
ಹುಬ್ಬಳ್ಳಿ: ಚೀನಾ ದೇಶಕ್ಕೂ ಎದುರುತ್ತರ ನೀಡುವಷ್ಟು ಭಾರತ ಬಲಿಷ್ಠವಾಗಿ ಬೆಳೆದಿದೆ. ಇದು ಅರವತ್ತೆಂಟರ ಭಾರತ ಅಲ್ಲ, ಹದಿನೆಂಟರ ಮೋದಿ ಭಾರತ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.
ನವಲಗುಂದ ತಾಲೂಕಿನ ನಲವಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ಸಿನವರು ಸೈನಿಕರ ಕೈ ಕಟ್ಟಿಹಾಕುವ ಕೆಲಸ ಮಾಡುತ್ತಾರೆ. ದೇಶದಲ್ಲೀಗ ಭಯೋತ್ಪಾದನೆ ನಿಗ್ರಹವಾಗಲು ಸೈನಿಕರಿಗೆ ಕೊಟ್ಟ ವಿಶೇಷ ಅಧಿಕಾರ ಕಾರಣವಾಗಿದ್ದು, ಸದೃಢ ದೇಶಕ್ಕೆ ಮೋದಿ ಅವಶ್ಯಕ ಎಂದು ಹೇಳಿದರು. ಅಣ್ಣಿಗೇರಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಮೋದಿಯವರು ಮತ್ತೆ ಪ್ರಧಾನಿಯಾಗಲು ಸರಳ ಹಾಗೂ ಪ್ರಾಮಾಣಿಕ ಸಂಸದರಾಗಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ರಾಜಶೇಖರ ಕಂಪ್ಲಿ, ನಿಂಗಪ್ಪ ಮಾಯಣ್ಣವರ, ಷಣ್ಮುಖ ಗುರಿಕಾರ, ಎಚ್‌.ಕೆ. ಪಾಟೀಲ ಇನ್ನಿತರರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next