Advertisement

ಸೆಮಿ ಲಾಕ್‌ಡೌನ್‌ನಲ್ಲೂ  ಕೈಹಿಡಿದ ನರೇಗಾ ಜಲಶಕ್ತಿ ಅಭಿಯಾನ |

07:16 PM Apr 26, 2021 | Team Udayavani |

ಹುಬ್ಬಳ್ಳಿ: ರಾಜ್ಯ ಸರಕಾರ ಕೋವಿಡ್‌-19ರ 2ನೇ ಅಲೆಯು ವ್ಯಾಪಿಸುತ್ತಿರುವ ಹಿನ್ನೆಲೆ ಸೆಮಿ ಲಾಕ್‌ ಡೌನ್‌ ಘೋಷಿಸಿದ್ದು, ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ  ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ.

Advertisement

ಗ್ರಾಮೀಣ ಭಾಗದ ಜನರ ಕೈಗಳಿಗೆ ಕೆಲಸ ನೀಡುವುದರೊಂದಿಗೆ ಜಲಶಕ್ತಿ ಅಭಿಯಾನ ಮೂಲಕ ಮಳೆ ನೀರು ಹಿಡಿದಿಡುವ ಗಂಗಾವತರಣ ಕಾರ್ಯ ಮುಂದುವರಿದಿದೆ. ಹುಬ್ಬಳ್ಳಿ ತಾಪಂ ವ್ಯಾಪ್ತಿಯಲ್ಲಿ ಈ ವರ್ಷ ಜಲಶಕ್ತಿ ಅಭಿಯಾನದಡಿ 1964 ಕಾಮಗಾರಿ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ 250 ಕಾಮಗಾರಿಗಳು ಆರಂಭವಾಗಿವೆ. ವಾರ್ಷಿಕ 3.75 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. ಪ್ರಸಕ್ತ ಏಪ್ರಿಲ್‌ ತಿಂಗಳಲ್ಲಿ 37,314 ಮಾನವ ದಿನಗಳ ಗುರಿ ನಿಗದಿ ಪಡಿಸಿಕೊಂಡಿದ್ದು, ಅದಲ್ಲಿ 15,558 ಮಾನವ ದಿನ ಕಾರ್ಯ ಪೂರ್ಣಗೊಳಿಸಿ ಶೇ.42 ಸಾಧನೆ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ತಾಪಂ ಇಒ ಗಂಗಾಧರ ಕಂದಕೂರ, ಮಹಿಳಾ ಕಾಯಕೋತ್ಸವ ಹಾಗೂ ದುಡಿಯೋಣು ಬಾರಾ ಅಭಿಯಾನ ಮೂಲಕ ಸಾಕಷ್ಟು ಜನರ ಉದ್ಯೋಗ ಖಾತ್ರಿ ಯೋಜನೆಯಡಿ ಪಾಲ್ಗೊಳ್ಳಲು ಪೊÅàತ್ಸಾಹಿಸಲಾಗುತ್ತಿದೆ. ಕೋವಿಡ್‌ ಮುಂಜಾಗ್ರತವಾಗಿ ಕೂಲಿಕಾರರಿಗೆ ಮಾಸ್ಕ್ ಹಾಗೂ ಸ್ಯಾನಿಟೆಸರ್‌ ವಿತರಿಸಲಾಗಿದೆ. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕುಸುಗಲ್ಲ ಗ್ರಾಮದಲ್ಲಿ 50 ಕೂಲಿಕಾರರು ಬದು ನಿರ್ಮಾಣದಲ್ಲಿ ತೊಡಗಿದ್ದಾರೆ. ಇದರಿಂದ ಮಳೆಯ ನೀರು ಸಂಗ್ರಹವಾಗಲು ಅವಕಾಶವಾಗಿದೆ.

ಜಲಶಕ್ತಿ ಅಭಿಯಾನದಡಿ ಕೃಷಿ ಹೊಂಡ, ಬದು ನಿರ್ಮಾಣ, ಸೋಕ್‌ ಪಿಟ್‌, ಪೌಷ್ಟಿಕ ತೋಟ, ಬಾರ್ಡರ್‌ ಚಕ್‌, ವೈಯಕ್ತಿಕ ಬೋರವೆಲ್‌ ಮರುಪೂರಣ, ದನ, ಮೇಕೆ, ಕೋಳಿ ಶೆಡ್‌ ಕಾರ್ಯಕ್ರಮಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮಸ್ಥರು ಸಹ ಉತ್ತಮ ಸ್ಪಂದನೆ ತೋರುತ್ತಿದ್ದಾರೆ ಎಂದರು. ತಾಪಂ ಸಹಾಯಕ ನಿರ್ದೇಶಕ ಪಾಂಡುರಂಗ ಕರಿಯಪ್ಪಹಟ್ಟಿ ಅವರು, ಕುಸುಗಲ್ಲ ಗ್ರಾಮದಲ್ಲಿ 10 ತಂಡಗಳು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿವೆ. ಬದು ನಿರ್ಮಾಣ ಸಂದರ್ಭದಲ್ಲಿ ಮಾರ್ಗದರ್ಶಿ ಸೂಚಿ ಅನುಸಾರ ಇಬ್ಬರು ಕೂಲಿಕಾರರಿಗೆ ಕೆಲಸ ನಿರ್ವಹಿಸಲು ಅನುವು ಮಾಡಿ ಕೊಡಲಾಗಿದೆ.  ಕುಸುಗಲ್ಲ ಗ್ರಾಮಕ್ಕೆ ಹುಬ್ಬಳ್ಳಿ ಶಹರ ಹತ್ತಿರದಲ್ಲಿದ್ದರೂ ಸೆಮಿ ಲಾಕ್‌ಡೌನ್‌ದಿಂದ ಕೆಲಸ ದೊರಕುತ್ತಿಲ್ಲ. ಈ ಸಂದರ್ಭದಲ್ಲಿ ನರೇಗಾ ಗ್ರಾಮೀಣ ಜನರಿಗೆ ಅನುಕೂಲವಾಗಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ನೀಲವ್ವ ಢಾಲಾಯತ್‌, ಸದಸ್ಯ ಸೋಮನಗೌಡ ಪಾಟೀಲ ಮಾತನಾಡಿ, ಸೆಮಿ ಲಾಕ್‌ಡೌನ್‌ ಸಂದರ್ಭದಲ್ಲಿ ಕೂಡ ಸರಕಾರ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮಸ್ಥರಿಗೆ ಕೆಲಸ ನೀಡಿ ಉಪಜೀವನಕ್ಕೆ ದಾರಿ ಮಾಡಿ ಕೊಟ್ಟಿದೆ ಎಂದರು. ಕೂಲಿಕಾರ ಖಾದರಸಾಬ ನದಾಫ್‌ ಮಾತನಾಡಿ, ಯೋಜನೆಯಿಂದ ಕುಟುಂಬ ನಿರ್ವಹಣೆ ಸಹಾಯಕವಾಗಿದೆ. ಕೆಲಸದ ಸ್ಥಳದಲ್ಲಿ ನಮಗಾಗಿ ಮಾಸ್ಕ್, ಸ್ಯಾನಿಟೈಸರ್‌, ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಕೂಡ ನಮಗೆ ಕೆಲಸ ದೊರೆತು ಅನುಕೂಲವಾಗಿದೆ ಎಂದರು. ಫಲಾನುಭವಿಗಳಾದ ರಾಜಬಿ ಕುಸುಗಲ್‌,ಮಂಜುನಾಥ ಮಾತನಾಡಿ, ದಂಪತಿ ಸಮೇತ ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಇದರಿಂದ ಅನುಕೂಲವಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next