Advertisement

ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೇನಾಮೆ ನೀಡಿದ್ದೇನೆ: ನಾರಾಯಣಗೌಡ

07:14 PM Nov 05, 2019 | mahesh |

ಮಂಡ್ಯ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬಿಎಸ್ ವೈ ಅವರು ಒಂದು ಸಾವಿರ ಕೋಟಿ ಅನುದಾನವನ್ನು ಕೊಟ್ಟಿದ್ದಾರೆ. ನಾನು ಕೇಳಿದ್ದು 700 ಕೋಟಿ, ಆದರೆ ಮುಖ್ಯಮಂತ್ರಿಯವರು 300 ಕೋಟಿ ಸೇರಿಸಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಕೆ.ಆರ್.ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಹೇಳಿದರು.

Advertisement

ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಮಾತನಾಡಿದ ಅವರು ತಾಲೂಕಿನ ಅಭಿವೃದ್ಧಿಗೆ ಮೊದಲ ಕಂತಿನ‌ ಅನುದಾನವಾಗಿ 212 ಕೋಟಿ ಅನುದಾನ ಬಂದಿದೆ. ಹಂತ ಹಂತವಾಗಿ ಉಳಿದ ಅನುದಾನ‌ ಕೂಡ ನಮ್ಮ ತಾಲೂಕಿಗೆ ಬರುತ್ತದೆ. ಕ್ಷೇತ್ರದ ಅಭಿವೃದ್ದಿಗಾಗಿ ಶಾಸಕ ಸ್ಥಾನಕ್ಕೆ ರಾಜೇನಾಮೆ ನೀಡಿ ಯಡಿಯೂರಪ್ಪನವರ ಜೊತೆ ಕೈ ಜೋಡಿಸಿದ್ದೇನೆ ಎಂದು ಹೇಳಿದರು.

ಮೈತ್ರಿ ಸರ್ಕಾರ ಇದ್ದಾಗ ನಮ್ಮ ಕ್ಷೇತ್ರಕ್ಕೆ ಬರುತಿದ್ದ ಹಣವನ್ನು ಹಾಸನಕ್ಕೆ ಕಿತ್ಕೊಂಡು ಹೋಗುತ್ತಿದ್ದರು ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಜೆಡಿಎಸ್ ಮುಖಂಡರು ನನಗೆ ಕಳೆದ ಆರೂವರೆ ವರ್ಷ ಸತತವಾಗಿ ಕಿರುಕುಳ ಕೊಟ್ಟಿದ್ದಾರೆ‌‌, ಚಪ್ಪಲಿಗಿಂತ ಕಡೆಯಾಗಿ ಕಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಗುರಿ. ಅದಕ್ಕಾಗಿ ನಾನು ಸ್ವಯಾರ್ಜಿತ ಆಸ್ತಿಯಲ್ಲಿ ಶೇ.50ರಷ್ಟು ಮೀಸಲಿಡುತ್ತೇನೆ ಇದನ್ನು ಬಾಂಡ್ ಪೇಪರ್ ನಲ್ಲಿ ಬರೆದು ಕೊಡುತ್ತೇನೆ ಜೆಡಿಎಸ್ ಮುಖಂಡರು ಅವರು ಮೀಸಲಿಡಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next