Advertisement

Congress ಗಾಂಧಿ ಕುಟುಂಬದ ವಿರುದ್ಧ ನರಸಿಂಹ ರಾವ್‌ ಮೊಮ್ಮಗ ಆಕ್ರೋಶ

12:41 AM Feb 10, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷದವರಾಗಿದ್ದರೂ ನರಸಿಂಹ ರಾವ್‌ ಅವರಿಗೆ ಬಿಜೆಪಿಯ ಮೋದಿ ಸರಕಾರ ಭಾರತ ರತ್ನವನ್ನು ಘೋಷಿಸಿತು, ತಮ್ಮದೇ ಪಕ್ಷದವರಾದರೂ ಕಾಂಗ್ರೆಸ್‌ ತನ್ನ ವೈಫ‌ಲ್ಯಕ್ಕೂ ರಾವ್‌ ಅವರನ್ನೇ ಹೊಣೆ ಮಾಡಿತ್ತು ಇದಕ್ಕೆಲ್ಲ ಗಾಂಧಿ ಪರಿವಾರವೇ ನೇರ ಹೊಣೆ ಎಂದು ರಾವ್‌ ಅವರ ಮೊಮ್ಮಗ ಎನ್‌.ವಿ. ಸುಭಾಷ್‌ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿ ದ್ದಾರೆ.

Advertisement

ಪ್ರಶಸ್ತಿ ಘೋಷಣೆ ಯಾಗುತ್ತಿದ್ದಂತೆಯೇ ಈ ಕುರಿತು ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ರಾಷ್ಟ್ರೀಯ ನಾಯಕರಾಗಿ ಇತರ ನಾಯಕ ರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ. ಅವರಿಗೆ ಪ್ರಶಸ್ತಿ ಲಭಿಸುತ್ತದೆ ಆದರೆ ಅದು ತಡವಾಗಿ ಎಂದು ನಿರೀಕ್ಷಿಸಿದ್ದೆವು. ಇದೀಗ ಪ್ರಶಸ್ತಿ ಸಂದಿದೆ ಎಂದಿ ದ್ದಾರೆ. ಇದೇ ವೇಳೆ 2004 ರಿಂದ 2014ರ ವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿ ದ್ದಾಗಲೂ ಕಾಂಗ್ರೆಸ್‌ ಪ್ರಶಸ್ತಿ ಘೋಷಿ ಸುವುದು ಬಿಡಿ, ತಮ್ಮ ಪಕ್ಷದ ವೈಫ‌ಲ್ಯ ಗಳಿಗೂ ಪಿವಿಎನ್‌ ಅವರನ್ನೇ ಹೊಣೆ ಮಾಡುತ್ತಿತ್ತು ಎಂದು ಬಿಜೆಪಿ ನಾಯಕರೂ ಆಗಿರುವ ಸುಭಾಷ್‌ ಆಕ್ಷೇಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next