Advertisement

ನರಗುಂದ: ವರುಣನ ಕೃಪೆಗಾಗಿ ಕೋಟಿ ಜಪಯಜ್ಞ

10:27 AM Jun 23, 2019 | Team Udayavani |

ನರಗುಂದ: ವರುಣನ ಕೃಪೆಗಾಗಿ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಸಮಸ್ತ ಸಮಾಜ ಬಾಂಧವರ ಸಹಯೋಗದಲ್ಲಿ ಆರ್ಯ ವೈಶ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಒಟ್ಟು 1.21 ಕೋಟಿ ಜಪಯಜ್ಞ ನೆರವೇರಿಸಿ ಮಳೆಗೆ ಪ್ರಾರ್ಥಿಸಲಾಗಿದೆ.

Advertisement

ಜೂ. 14ರಿಂದ ಪ್ರಾರಂಭಗೊಂಡ ಕೋಟಿ ಜಪಯಜ್ಞ ಕಾರ್ಯಕ್ರಮದ ಸಮಾರೋಪ ದಿನವಾದ ಶನಿವಾರ ಬೆಳಗ್ಗೆವರೆಗೆ ಒಟ್ಟು 1.21 ಕೋಟಿ ಜಪ ಮಾಡಲಾಗಿದೆ. ಅಲ್ಲದೇ ಬೆಳಗಿನ ಜಾವ 121 ಕೊಡಗಳಿಂದ ನಗರೇಶ್ವರರ ಮೂರ್ತಿಗೆ ಜಲಾಭಿಷೇಕ ನೆರವೇರಿಸಲಾಗಿದೆ.

ಕೋಟಿ ಜಪಯಜ್ಞ ಮುಕ್ತಾಯ ಅಂಗವಾಗಿ ಮಧ್ಯಾಹ್ನ ನಗರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಎಲ್ಲ ಬಾಂಧವರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next