Advertisement

ಜುಲೈ 24ರಂದು “ನನ್ನ ಪ್ರಕಾರ’ಹಾಡು ಬಿಡುಗಡೆ

09:23 AM Jul 24, 2019 | Lakshmi GovindaRaj |

ಗುರುರಾಜ್‌ ಎಸ್‌. ಅವರು ನಿರ್ಮಾಣ ಮಾಡಿರುವ “ನನ್ನ ಪ್ರಕಾರ’ ಚಿತಕ್ಕಾಗಿ ಕಿರಣ್‌ ಕಾವೇರಪ್ಪ ಅವರು ಬರೆದಿರುವ “ಹೂ ನಗೆ ಆಮಂತ್ರಿಸಿದೆ” ಎಂಬ ಹಾಡು ಜುಲೈ 24ರ ಬುಧವಾರ ಸಂಜೆ 5ಗಂಟೆಗೆ ಬಿಡುಗಡೆಯಾಗಲಿದೆ.

Advertisement

ಕಾರ್ತಿಕ್‌ ಹಾಗೂ ಅನುರಾಧ ಭಟ್‌ ಹಾಡಿರುವ ಈ ಹಾಡಿಗೆ ಅರ್ಜುನ್‌ ರಾಮು ಸಂಗೀತ ನೀಡಿದ್ದಾರೆ. ಕಿಶೋರ್‌ ಹಾಗೂ ಪ್ರಿಯಾಮಣಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ನಯ್‌ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹುಲಿರಾಯ ಖ್ಯಾತಿಯ ಅರ್ಜುನ್‌ ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ.

ಮನೋಹರ್‌ ಜೋಷಿ ಛಾಯಾಗ್ರಹಣ, ಸತೀಶ್‌ ಸಂಕಲನ ಡಿಫ‌ರೆಂಟ್‌ ಡ್ಯಾನಿ, ಥ್ರಿಲ್ಲರ್‌ ಮಂಜು ಸಾಹಸ, ಮದನ್‌ – ಹರಿಣಿ, ನಾಗೇಶ್‌ ನೃತ್ಯ ನಿರ್ದೇಶ‌ನ ಹಾಗೂ ವಿನೋದ್‌ ರಾವ್‌ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಕವಿರಾಜ್‌, ಬಹದ್ದೂರ್‌ ಚೇತನ್‌, ಕಿರಣ್‌ ಕಾವೇರಪ್ಪ ಬರೆದಿದ್ದಾರೆ. ಕಿಶೋರ್‌, ಪ್ರಿಯಾಮಣಿ, ಮಯೂರಿ, ಅರ್ಜುನ್‌ ಯೋಗಿ, ನಿರಂಜನ್‌ ದೇಶಪಾಂಡೆ, ಗಿರಿಜಾ ಲೋಕೇಶ್‌, ವೈಷ್ಣವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next