Advertisement

Nanjangud; ಬೀದಿ ನಾಯಿಗಳಿಂದ ಜೀವ ರಕ್ಷಿಸಿಕೊಳ್ಳಲು ನಾಲೆಗೆ ಹಾರಿದ ಜಿಂಕೆಯ ರಕ್ಷಣೆ

08:55 PM Oct 01, 2023 | Team Udayavani |

ನಂಜನಗೂಡು : ಕುರುಚಲು ಪ್ರದೇಶದ ಕಿರು ಅರಣ್ಯದಿಂದ ನಾಡಿನತ್ತ ಧಾವಿಸಿದ ಜಿಂಕೆ ಬೀದಿ ನಾಯಿಗಳು ಸುತ್ತುವರೆದ ಪರಿಣಾಮ ಜೀವ ರಕ್ಷಿಸಿಕೊಳ್ಳುವ ಸಲುವಾಗಿ ಕಬಿನಿ ನಾಲೆಗೆ ಹಾರಿದೆ. ಮೇಲಕ್ಕೆ ಬರಲಾಗದೆ ಒದ್ದಾಡುತ್ತಿದ್ದ ಜಿಂಕೆಯನ್ನು ಕಂಡ ಬಿಳಿಗೆರೆ ಎಸ್ ಐ ಗ್ರಾಮಸ್ಥರ ಸಹಾಯದಿಂದ ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

Advertisement

ಜಿಂಕೆಯ ಹಿಂಬದಿಯ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವುದು ಕಂಡು ಬಂದಿದೆ. ನಂಜನಗೂಡಿನ ಪಶು ಇಲಾಖೆಯಲ್ಲಿ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next