Advertisement

ಆರ್ಥಿಕ ಸಂಕಷ್ಟ: ಬಾಗಿಲು ಮುಚ್ಚಿದ ಬೆಂಗಳೂರಿನ ಶಾಪ್‌ಎಕ್ಸ್‌

08:00 PM Aug 23, 2022 | Team Udayavani |

ನವದೆಹಲಿ: ಬೆಂಗಳೂರಿನ ಸ್ಟಾರ್ಟ್‌ಅಪ್‌ ಆಗಿರುವ ಶಾಪ್‌ಎಕ್ಸ್‌ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದಾಗಿ ಬಾಗಿಲು ಮುಚ್ಚಿದೆ.

Advertisement

ಉದ್ಯಮಿ ನಂದನ್‌ ನೀಲೆಕಣಿ ಅವರ ಹೂಡಿಕೆಯಿದ್ದ ಈ ಕಂಪನಿಯಲ್ಲಿ ಆದಾಯ ಭಾರೀ ಪ್ರಮಾಣದಲ್ಲಿ ಕುಸಿದಿರುವುದರಿಂದಾಗಿ ಸಂಸ್ಥೆಯು ದಿವಾಳಿತನ ಘೋಷಿಸಲು ಕಳೆದ ತಿಂಗಳೇ ಅರ್ಜಿ ಸಲ್ಲಿಸಿದೆ ಎಂದೂ ತಿಳಿದುಬಂದಿದೆ.

ಅಪೂರ್ವ ಜೋಯಿಸ್‌ ಮತ್ತು ಅಮಿತ್‌ ಶರ್ಮಾ ಅವರು 2015ರಲ್ಲಿ ಆರಂಭಿಸಿದ ಈ ಸಂಸ್ಥೆಯು ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಮಾರಾಟಗಾರರೊಂದಿಗೆ ಹಾಗೂ ಗ್ರಾಹಕರೊಂದಿಗೆ ಸಂಪರ್ಕಿಸುವಂತೆ ಮಾಡುತ್ತಿತ್ತು.

ಸಂಸ್ಥೆಗೆ 520 ಕೋಟಿ ರೂ.ಗೂ ಅಧಿಕ ಹೂಡಿಕೆಯೂ ಹರಿದುಬಂದಿತ್ತು. ಟ್ರ್ಯಾಕ್ಸನ್‌ ಡೇಟಾ ವರದಿಯ ಪ್ರಕಾರ ಸಂಸ್ಥೆಯ ಮೌಲ್ಯ 1,400 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next