Advertisement

ನಂದಳಿಕೆಯಲ್ಲಿ ಅಯನೋತ್ಸವ , ರಾತ್ರಿಯ ಸಿರಿ ಜಾತ್ರೆ 

12:30 AM Mar 23, 2019 | |

ಬೆಳ್ಮಣ್‌: ಐತಿಹಾಸಿಕ  ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಯನೋತ್ಸವ ಹಾಗೂ ರಾತ್ರಿಯ ಸಿರಿ ಜಾತ್ರೆ ಗುರುವಾರ ಭಾರೀ ಸಂಭ್ರಮದಿಂದ ನಡೆಯಿತು.

Advertisement

ಪರಂಪರೆಯಂತೆ ನಂದಳಿಕೆ ಚಾವಡಿ ಆರಮನೆಯಿಂದ ಶ್ರೀ ಸುಂದರರಾಮ ಹೆಗ್ಡೆಯವರನ್ನು   ಮೆರವಣಿಗೆಯೊಂದಿಗೆ ಕರೆತರಲಾಗಿ ಕ್ಷೇತ್ರದಲ್ಲಿ ಅಯನೋತ್ಸವ, ಉತ್ಸವ ಬಲಿ, ಕೆರೆ ದೀಪೋತ್ಸವ, ಬಲ್ಲೇಶ್ವರ ಪೂಜೆ ,ಕಟ್ಟೆಪೂಜೆ ಮಹೋತ್ಸವ ನಡೆದು ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿ ಧಿಯಲ್ಲಿ  ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ವೈಭವದ ಸಿರಿಜಾತ್ರಾ ವಿ  ವೈಭವದಿಂದ ನಡೆಯಿತು.

ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ನಂದಳಿಕೆ ಚಾವಡಿ ಅರಮನೆ ಎನ್‌. ಸುಂದರರಾಮ ಹೆಗ್ಡೆ ಮಾರ್ಗದರ್ಶನದಲ್ಲಿ ನಂದಳಿಕೆ ಚಾವಡಿ ಆರಮನೆ ಸುಹಾಸ್‌ ಹೆಗ್ಡೆ ನೇತೃತ್ವದಲ್ಲಿ ಸಂಭ್ರಮದ ಸಿರಿಜಾತ್ರಾ ಮಹೋತ್ಸವ ನಡದು ಕ್ಷೇತ್ರದ ಪ್ರಧಾನ ಆರ್ಚಕ ಹರೀಶ್‌ ತಂತ್ರಿ, ದೇವಳದ ವ್ಯವಸ್ಥಾಪಕ ರವಿರಾಜ ಭಟ್‌ ಹಾಗೂ ಅಸಂಖ್ಯಾತ ಮಂದಿ ಭಕ್ತಾದಿಗಳು ಬೆಳಗ್ಗಿನವರೆಗೆ ಸಿರಿಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಹೊರ ಜಿಲ್ಲೆಯವರೂ ಭಾಗಿ
ಉಡುಪಿ,  ದ.ಕ.  ಮಾತ್ರವಲ್ಲದೆ ಚಿಕ್ಕಮಗಳೂರು, ಶಿವಮೊಗ್ಗ, ಸೇರಿದಂತೆ ಮಲೆನಾಡಿನ ಭಾರೀ ಭಕ್ತರು ಈ ಸಿರಿ ಜಾತ್ರೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಅನ್ನಸಂತರ್ಪಣೆಯ ಜತೆ ಅಚ್ಚುಕಟ್ಟಿನ ವ್ಯವಸ್ಥೆಗೆ ಹೆಸರಾದ ಸಿರಿ ಜಾತ್ರೆ ರಾತ್ರಿಯೂ ಅಷ್ಟೇ ವ್ಯವಸ್ಥಿತವಾಗಿ ನಡೆದು ಬಾರೀ ಮೆಚ್ಚುಗೆಗೆ ಪಾತ್ರವಾಯಿತು. ಸಿರಿ ಜಾತ್ರೆಯ ಈ ಸೊಬಗಿನಲ್ಲಿ ವಿವಿಧ ಕಲಾ ತಂಡಗಳೂ ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next