Advertisement

3ನೇ ಬಾರಿ ಪ್ರಧಾನಿಯಾಗಿ “ನಮೋ’ ಪ್ರಮಾಣ: ಕರಾವಳಿಯಲ್ಲಿ ಸಂಭ್ರಮಾಚರಣೆ

11:52 PM Jun 09, 2024 | Team Udayavani |

ಮಂಗಳೂರು: ನರೇಂದ್ರ ಮೋದಿ ಅವರು ರವಿವಾರ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತ್ತು.

Advertisement

ಮೋದಿಯವರ ಪ್ರಮಾಣವಚನ ಸಂಭ್ರಮ ಹಾಗೂ ನೂತನ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರ ಗೆಲುವಿನ ವಿಜಯೋತ್ಸವ ಕಾರ್ಯಕ್ರಮ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ರವಿವಾರ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯಿತು. ಪ್ರಮಾಣ ವಚನ ಸಮಾರಂಭ ವೀಕ್ಷಣೆಗೆ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ತಾಲೂಕು ಕೇಂದ್ರಗಳಲ್ಲೂ ಹರ್ಷಾಚರಣೆ ನಡೆಯಿತು.

ಸಂಭ್ರಮ, ಹರ್ಷೋದ್ಘಾರ
ಮೋದಿ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿದ ವೇಳೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರಮಾಣ ವಚನ ಸ್ವೀಕರಿಸುವ ವೇಳೆ ಎದ್ದು ನಿಂತು, ಚಪ್ಪಾಳೆ, ಶಿಳ್ಳೆ, ಪಟಾಕಿ, ಹರ್ಷೋದ್ಘಾರದೊಂದಿಗೆ ನಾಯಕರು, ಕಾರ್ಯಕರ್ತರು ಸಂಭ್ರಮಿಸಿದರು. ಜೈ ಜೈ ಮೋದಿ, ಜೈ ಬಿಜೆಪಿ ಘೋಷಣೆಗಳು ಮೊಳಗಿದವು.

ಬ್ಯಾನರ್‌, ಪೋಸ್ಟರ್‌,
ತಂಪು ಪಾನಿಯ ವಿತರಣೆ
ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿ ನಗರದ ಅಲ್ಲಲ್ಲಿ ಅಭಿಮಾನಿಗಳು ಪೋಸ್ಟರ್‌ ಅಳವಡಿಸಿದ್ದರು. ಮಣ್ಣಗುಡ್ಡದ ಸಂಘನಿಕೇತನದ ಬಳಿ ಮೋದಿ ಅಭಿಮಾನಿ ಶಂಕರ್‌ ಅವರು ಸಾರ್ವಜನಿಕರಿಗೆ ಉಚಿತ ಕಬ್ಬು ಜ್ಯೂಸ್‌ ವಿತರಿಸಿದರು.

ಜನಾಶೀರ್ವಾದದಿಂದ
ಪಟ್ಟಾಭಿಷೇಕ: ಕಾಮತ್‌
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ನರೇಂದ್ರ ಮೋದಿ ಹ್ಯಾಟ್ರಿಕ್‌ ಸಾಧನೆಗೆ ಜನರ ಆಶೀರ್ವಾದ ಹಾಗೂ ಬೆಂಬಲವೇ ಕಾರಣ. ದ.ಕ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ ಗೆಲುವಿಗೆ ಅನೇಕರು ಶ್ರಮಿಸಿದ್ದಾರೆ. ಮುಂದಿನ ದಿನಗಳು ದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಿರಲಿವೆ. ಜನರ ನಂಬಿಕೆಗೂ ಮೀರಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ದೇಶದ ಪ್ರಗತಿಗೆ ಕೊಡುಗೆ ನೀಡಲಿದೆ ಎಂದರು.

Advertisement

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಿಶೋರ್‌ ಬೊಟ್ಯಾಡಿ, ಯತೀಶ್‌ ಆರ್ವರ್‌, ಮಂಡಲ ಅಧ್ಯಕ್ಷ ರಮೇಶ್‌ ಕಂಡೆಟ್ಟು, ಯುವ ಮೋರ್ಚ ಅಧ್ಯಕ್ಷ ನಂದನ್‌ ಮಲ್ಯ, ಮಹಿಳಾ ಮೋರ್ಚ ಅಧ್ಯಕ್ಷೆ ಮಂಜುಳಾ ರಾವ್‌, ಪ್ರಮುಖರಾದ ಕವಿತಾ ಸನಿಲ್‌, ಕಿಶೋರ್‌ ಕೊಟ್ಟಾರಿ, ಪೂರ್ಣಿಮಾ, ರಾಜಗೋಪಾಲ್‌ ರೈ, ವಿಕಾಸ್‌ ಪುತ್ತೂರು, ಬಾಲಕೃಷ್ಣ ಭಟ್‌, ಪೂಜಾ ಪೈ, ಜಗದೀಶ್‌ ಶೇಣವ, ಮಹೇಶ ಜೋಗಿ, ನಂದನ್‌ ಮಲ್ಯ, ಅಶ್ವಿ‌ತ್‌ ಕೊಟ್ಟಾರಿ ಸೇರಿದಂತೆ ಮನಪಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಉಡುಪಿ: ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಿ ದ್ದಂತೆಯೇ ಜಿಲ್ಲೆಯ ವಿವಿಧೆಡೆ ಸಂಭ್ರಮಾಚರಣೆ ನಡೆಯಿತು.ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಸಹಯೋಗದೊಂದಿಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಣತೆಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು ಪ್ರಮಾಣ ವಚನ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು.

ತಾಲೂಕು ಕೇಂದ್ರಗಳಲ್ಲೂ ಹರ್ಷಾಚರಣೆ ನಡೆಯಿತು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ಶಾಸಕ ಯಶಪಾಲ್‌ ಎ. ಸುವರ್ಣ, ಬಿಜೆಪಿ ಮುಖಂಡರಾದ ಕುಯಿಲಾಡಿ ಸುರೇಶ್‌ ನಾಯಕ್‌, ಕಿರಣ್‌ ಕುಮಾರ್‌ ಬೈಲೂರು, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ನಯನಾ ಗಣೇಶ್‌, ಶಿಲ್ಪಾ ಜಿ. ಸುವರ್ಣ, ಸಂಧ್ಯಾ ರಮೇಶ್‌, ವೀಣಾ ಎಸ್‌. ಶೆಟ್ಟಿ, ರಾಘವೇಂದ್ರ ಕುಂದರ್‌, ಶಿವಕುಮಾರ್‌ ಅಂಬಲಪಾಡಿ, ಗಿರೀಶ್‌ ಎಂ. ಅಂಚನ್‌, ಸುಮಿತ್ರಾ ಆರ್‌. ನಾಯಕ್‌, ಸುಜಾಲಾ ಸತೀಶ್‌, ನಳಿನಿ ಪ್ರದೀಪ್‌ ರಾವ್‌, ಭಾರತೀ ಚಂದ್ರಶೇಖರ್‌, ದಯಾಶಿನಿ, ಜಗದೀಶ್‌ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಆನಂದ ಸುವರ್ಣ, ಲಕ್ಷ್ಮೀಶ ಬಂಗೇರ, ಆಸೀಫ್ ಕಟಪಾಡಿ, ಅಂಡಾರು ದೇವಿ ಪ್ರಸಾದ್‌ ಶೆಟ್ಟಿ, ವೆಂಕಟರಮಣ ಕಿದಿಯೂರು, ನೀತಾ ಪ್ರಭು, ಸರೋಜಾ ಶೆಣೈ, ಪೂರ್ಣಿಮಾ ಶೆಟ್ಟಿ, ಪ್ರೀತಿ, ದೀಪಾ ಪೈ, ಸುಗುಣಾ ನಾಯ್ಕ…, ಸಂತೋಷ್‌ ಆಚಾರ್ಯ, ಸುರೇಶ್‌ ಶೆಟ್ಟಿ, ಸತೀಶ್‌ ಪೂಜಾರಿ ಕುಕ್ಕಿಕಟ್ಟೆ, ಹೇಮನಾಥ್‌ ಹೆಗ್ಡೆ, ದಿವಾಕರ ಶೆಟ್ಟಿ, ನಾಗರಾಜ್‌ ಕರ್ಕೇರ, ರಾಜೇಶ್‌ ಸುವರ್ಣ ಉಪಸ್ಥಿತರಿದ್ದರು.

ಸಿಹಿತಿಂಡಿ, ಚಹಾ ವಿತರಣೆ
ಮಣಿಪಾಲದ ಟೈಗರ್‌ ಸರ್ಕಲ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕರಿಗೆ ಸಿಹಿತಿಂಡಿ, ಚಹಾ ವಿತರಣೆ ಮಾಡಲಾಯಿತು.

ಶಾಸಕ ಯಶ್‌ಪಾಲ್‌ ಎ.ಸುವರ್ಣ, ನಗರಸಭಾ ಸದಸ್ಯರಾದ ಸುಮಿತ್ರಾ ನಾಯಕ್‌, ವಿಜಯಲಕ್ಷ್ಮೀ, ಕಲ್ಪನಾ ಸುಧಾಮ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಆಚಾರ್ಯ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಿತಿನ್‌ ಪೈ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿ‌ನಿ ಶೆಟ್ಟಿ, ಹಿಂದೂ ಯುವಸೇನೆ ಅಧ್ಯಕ್ಷ ಅಜಿತ್‌ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next