Advertisement

ಬಿಜೆಪಿಗೆ ಅಡ್ವಾಣಿ,ಕಟಿಯಾರ್‌,ವರುಣ್‌ ಗಾಂಧಿಯಂತವರು ಬೇಕಿಲ್ಲವೆ? 

10:38 AM Jan 22, 2017 | Team Udayavani |

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ 40 ಮಂದಿ ಪ್ರಮುಖ ನಾಯಕರನ್ನೊಳಗೊಂಡ ತಾರಾ ಪ್ರಚಾರಕರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.  ಅಚ್ಚರಿಯೆಂದರೆ ಬಿಜೆಪಿ ಹಿರಿಯ ಮುಖಂಡರಾದ ಎಲ್‌.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ,ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ವಿನಯ್‌ ಕಟಿಯಾರ್‌ ಹಾಗೂ ಯುವ ನಾಯಕ ವರುಣ್‌ ಗಾಂಧಿ ಪಟ್ಟಿಯಲ್ಲಿ ಇಲ್ಲ.

Advertisement

ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಸಿದ್ಧಪಡಿಸಿದ ತಾರಾ ಪ್ರಚಾರಕರ ಪಟ್ಟಿಯನ್ನು ರಾಜ್ಯಾಧ್ಯಕ್ಷ ಕೇಶವ್‌ ಪ್ರಸಾದ್‌ ಮೌರ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಈ ಪಟ್ಟಿಯಲ್ಲಿ   ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಸಚಿವರಾದ ಅರುಣ್‌ ಜೇಟ್ಲಿ, ಮನೇಕಾ ಗಾಂಧಿ, ವೆಂಕಯ್ಯ ನಾಯ್ಡು ಸೇರಿ ಇತರೆ 40 ನಾಯಕರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next