Advertisement

ರೆಡಿಯಾಗಲಿದೆ ‘ನಂಬುಗೆದ ಕೊರಗಜ್ಜ’

01:09 PM Nov 29, 2018 | |

ತುಳುನಾಡಿನಲ್ಲಿ ಕಾರಣಿಕದ ಅಜ್ಜ ಎಂದೇ ಪೂಜಿಸಲ್ಪಡುವುದು ಕೊರಗಜ್ಜ ದೈವವನ್ನು. ಕರಾವಳಿಯ ಮೂಲೆ ಮೂಲೆಯಲ್ಲಿ ಕೊರಗಜ್ಜನ ಸ್ಥಾನ ಹಾಗೂ ಕೊರಗಜ್ಜನಿಗೆ ಉತ್ಸಾವಾದಿಗಳು ನಡೆಯುತ್ತಾ ಬಂದಿದೆ. ಸಹಸ್ರ ಸಂಖ್ಯೆ ಭಕ್ತರು ಸ್ವಾಮಿ ಕೊರಗಜ್ಜನನ್ನು ನಂಬಿಕೊಂಡು ಬಂದಿದ್ದಾರೆ. ಕೊರಗಜ್ಜ ದೈವವಾದ ಕಥೆ ಕೂಡ ಕರಾವಳಿಯಲ್ಲಿ ಬಹಳಷ್ಟು ಜನಜನಿತ. ವಿಶೇಷವೆಂದರೆ ತುಳುನಾಡಿನ ನಂಬಿಕೆಯಲ್ಲಿ ಮುಖ್ಯ ಸ್ಥಾನ ಪಡೆದುಕೊಂಡಿರುವ ಕೊರಗಜ್ಜನ ಕಥೆಯಾಧಾರಿತ ತುಳು ಸಿನೆಮಾವೊಂದು ಇದೀಗ ಸೆಟ್ಟೇರಲು ರೆಡಿಯಾಗಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಇದು ಅಪರೂಪದ ಸಂಗತಿ. ಈ ಹಿಂದೆ ತೆರೆಕಂಡಿದ್ದ ‘ಬರ್ಸ’ ಸಿನೆಮಾದಲ್ಲಿ ಕೊರಗಜ್ಜನ ಮಹಿಮೆಯನ್ನು ತೋರಿಸಲಾಗಿತ್ತು. ಇದೀಗ ಸೆಟ್ಟೇರುವ ಹೊಸ ಸಿನೆಮಾದಲ್ಲಿ ಕೊರಗಜ್ಜನ ಕಥೆಯನ್ನೇ ಮುಖ್ಯವಾಗಿ ತರಲಾಗುತ್ತದೆ. ‘ನಂಬುಗೆದ ಕೊರಗಜ್ಜ’ ಎಂಬ ಟೈಟಲ್‌ನಲ್ಲಿ ನೂತನ ಸಿನೆಮಾ ರೆಡಿಯಾಗಲಿದೆ. 

Advertisement

ಕೌಸ್ತುಭ ಸಿನಿ ಪ್ರೊಡಕ್ಷನ್‌ ಈ ಸಿನೆಮಾವನ್ನು ನಿರ್ಮಿಸಲಿದೆ. ಕಥೆ-ಚಿತ್ರಕಥೆ ಹಾಗೂ ನಿರ್ದೇಶನವನ್ನು ಮಿಲನ್‌ ಮರ್ಕಂಜ ಅವರೇ ವಹಿಸಿಕೊಳ್ಳಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಂ.ಕೆ.ಮಠ ಸಂಭಾಷಣೆ, ನರೇಂದರ್‌ ಗೌಡ ಛಾಯಾಗ್ರಹಣ, ಕೀರ್ತನ್‌ ಭಂಡಾರಿ ಸಾಹಿತ್ಯ ಹಾಗೂ ಜಗದೀಶ್‌ ಆಚಾರ್ಯ ಸಂಗೀತ ನಿರ್ದೇಶನ ನೀಡಲಿದ್ದಾರೆ. ಪ್ರಸ್ತುತ ಸಿನೆಮಾದ ಮಾದರಿ ವಿನ್ಯಾಸ ಬಿಡುಗಡೆ ಮಾಡಲಾಗಿದ್ದು, ಅಧಿಕೃತ ಪೋಸ್ಟರ್‌ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next