Advertisement

ಠಾಣೆ ಎದುರೇ ನಮಾಜ್‌

11:24 PM Dec 20, 2019 | Team Udayavani |

ದಾವಣಗೆರೆ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ಅನುಮತಿ ಕೋರಿ ಬಂದಿದ್ದ ಮುಸ್ಲಿಂ ಮುಖಂಡರು ಶುಕ್ರವಾರ ಮಧ್ಯಾಹ್ನ ಠಾಣೆ ಎದುರೇ ನಮಾಜ್‌ ಮಾಡಿದರು. ಪ್ರತಿಭಟನೆಗೆ ಅನುಮತಿ ಕೋರಿ ಆಜಾದ್‌ ನಗರ ಪೊಲೀಸ್‌ ಠಾಣೆ ಬಳಿ ಮುಸ್ಲಿಂ ಸಂಘಟನೆಗಳ ಮುಖಂಡರು, ಸಮುದಾಯದ ನೂರಾರು ಮಂದಿ ಸೇರಿದ್ದರು. ಆದರೆ, ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದರು.

Advertisement

ಆಗ, ಪ್ರತಿಭಟನಾಕಾರರು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮನವಿ ಸ್ವೀಕರಿಸಲು ಖುದ್ದು ಜಿಲ್ಲಾಧಿಕಾರಿಗಳೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಮಧ್ಯೆ, ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸುವ ಸಮಯ ಮೀರುತ್ತಿತ್ತು. ಆಗ ಪೊಲೀಸರೇ ಮುಸ್ಲಿಂ ಮುಖಂಡರಿಗೆ ನಮಾಜ್‌ ಮಾಡಲು ಠಾಣೆ ಮುಂದೆ ಚಾಪೆ ವ್ಯವಸ್ಥೆ ಮಾಡಿದರು. ಆಗ ಅಲ್ಲಿಯೇ ಕೆಲವರು ಪ್ರಾರ್ಥನೆ ಸಲ್ಲಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next