Advertisement

ಪೂಜಾರಿಗೆ ಶಿರಬಾಗಿದ ನಳಿನ್‌

10:48 AM Nov 20, 2017 | Team Udayavani |

ಬಂಟ್ವಾಳ: ಶ್ರೀಕ್ಷೇತ್ರ ಪೊಳಲಿಗೆ ರವಿವಾರ ನಡೆದ ಧ್ವಜಸ್ತಂಭ ಮೆರವಣಿಗೆ ಹಲವು ಹೊಸ ನೋಟಗಳಿಗೆ ಕಾರಣವಾಗಿದೆ. ಹಿರಿಯ ನೇತಾರ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಬರುತ್ತಿದ್ದಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಶಿರಬಾಗಿ ವಂದಿಸಿ ಆಶೀರ್ವಾದ ಪಡೆದರು.

Advertisement

ಪೂಜಾರಿಯವರ ಆರೋಗ್ಯ ವಿಚಾರಿಸಿದ ನಳಿನ್‌ ಅವರು ಪೂಜಾರಿ ಅವರ ತೋಳನ್ನು ಆಧರಿಸಿ ಹಿಡಿದುಕೊಂಡು ಬಂದು ಆಸನದಲ್ಲಿ ಕುಳ್ಳಿರಿಸಿದರು. ಬಳಿಕ ಕುಶಲೋಪರಿ ವಿಚಾರಿಸಿಕೊಂಡರು. ಮೆರ ವಣಿಗೆಗೆ ಚಾಲನೆ ನೀಡು ವಾಗಲೂ ಜತೆಗಿದ್ದರು. ಈ ಸಂದರ್ಭ ತಾನು ಬಿ.ಸಿ.ರೋಡಿನ ನಿವಾಸದಲ್ಲಿ ವಿಶ್ರಾಂತಿ ಪಡೆಯು ತ್ತಿರುವುದಾಗಿ ಪೂಜಾರಿ ತಿಳಿಸಿದರು.

ಸಚಿವ ಬಿ. ರಮಾನಾಥ ರೈ ಬಂದಾಗಲೂ ಪೂಜಾರಿ ಅವರ ಕೈಕುಲುಕಿ ಮಾತನಾಡಿದರು. ತನಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ತಿಳಿ ಸಿದರು. ಸಚಿವರ ಜತೆಗಿದ್ದವರು ಕುತೂಹಲದಿಂದ ವಿದ್ಯಮಾನವನ್ನು ನೋಡಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next