Advertisement

ಕಸ ಗುಡಿಸಿ, ಸಸಿ ನೆಟ್ಟು ಸ್ವಚ್ಚತಾ ಸಪ್ತಾಹಕ್ಕೆ ಚಾಲನೆ ನೀಡಿದ ನಳಿನ್ ಕಟೀಲ್

09:55 AM Sep 17, 2019 | keerthan |

ಚಿತ್ರದುರ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕಸ ಗುಡಿಸಿ, ಸಸಿ ನೆಟ್ಟು ಸ್ವಚ್ಚತಾ ಸಪ್ತಾಹಕ್ಕೆ ಚಾಲನೆ ನೀಡಿದರು.

Advertisement

ಭಾನುವಾರ ರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಹಮ್ಮಿಕೊಂಡಿರುವ ಸ್ವಚ್ಚತಾ ಸಪ್ತಾಹಕ್ಕೆ ಚಾಲನೆ ನೀಡಿದರು.

ಕೈಲೊಂದು ಪೊರಕೆ ಹಿಡಿದು, ಆಸ್ಪತ್ರೆ ಆವರಣ, ಅಲ್ಲಿನ ಬೀದಿಗಳನ್ನು ಕಾರ್ಯಕರ್ತರು ಹಾಗೂ ಅಲ್ಲಿನ ಸಿಬ್ಬಂದಿ ಜತೆಗೂಡಿ ಸ್ವಚ್ಚಗೊಳಿಸಿದರು.

ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಸದ ಎ. ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್, ಮುಖಂಡರಾದ ಲಿಂಗಮೂರ್ತಿ, ಜಿ.ಎಂ. ಸುರೇಶ್, ರತ್ನಮ್ಮ, ಶಿವಣ್ಣಚಾರ್, ತಿಪ್ಪೇಸ್ವಾಮಿ ಹಾಗೂ ಡಿಎಚ್‍ಒ ಫಾಲಾಕ್ಷಾ, ಡಿ ಎಸ್ ಬಸವರಾಜಪ್ಪ, ಆರ್ ಎಂ ಓ ಜಯಪ್ರಕಾಶ್ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next