Advertisement

ಬಿಎಸ್ ವೈ ಸರ್ಕಾರ ನೋಡಿಕೊಳ್ಳುತ್ತಾರೆ, ನಾನು ಪಕ್ಷ ನೋಡಿಕೊಳ್ಳುತ್ತೇನೆ‌: ನಳಿನ್

09:39 AM Nov 11, 2019 | keerthan |

ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಸುಪ್ರೀಂ. ಅವರಿಗೂ ನನಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ಸರ್ಕಾರ ನೋಡಿಕೊಳ್ಳುತ್ತಾರೆ, ನಾನು ಪಕ್ಷ ನೋಡಿಕೊಳ್ಳುತ್ತೇನೆ‌ ಎಂದು ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಅಯೋಧ್ಯೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿದೆ. ರಾಮ ಮಂದಿರವಲ್ಲದೆ ರಾಷ್ಟ್ರ ಮಂದಿರವಾಗಿ ಪರಿವರ್ತನೆಯಾಗಿದೆ. 370 ವಿಧಿ ರದ್ದು ಮತ್ತು ನಿನ್ನೆ ಬಂದಿರುವ ತೀರ್ಪು ವಿಶ್ವಾಸವನ್ನ ಹೆಚ್ಚು ಮಾಡಿದೆ ಎಂದು ಹೇಳಿದರು.

ನೆರೆಯನ್ನ ಸರಿಯಾಗಿ ನಿರ್ವಹಣೆ ಮಾಡಿದ್ದು ಬಿ.ಎಸ್ ಯಡಿಯೂರಪ್ಪ ಮಾತ್ರ ಎಂದ ನಳಿನ್ ಕಳೆದೊಂದು ವರ್ಷದಿಂದ ನಿಂತು ಹೋಗಿದ್ದ ಸರ್ಕಾರಕ್ಕೆ ಈಗ ವೇಗ ದೊರೆತಿದೆ ಎಂದರು.

ಬಿಜೆಪಿಯ ರಾಜು ಕಾಗೆ ಮತ್ತು ಡಿ ಕೆ ಶಿವಕುಮಾರ್ ಭೇಟಿಯಾದ ವಿಚಾರದಲ್ಲಿ ಮಾತನಾಡಿದ ಕಟೀಲ್, ರಾಜಕೀಯದಲ್ಲಿ ವೈಯಕ್ತಿಕ ಸಂಬಂಧಗಳು ಇರುತ್ತವೆ. ಸಂಬಂಧ ಇದ್ದ ಕೂಡಲೇ ಅವರು ಕಾಂಗ್ರೆಸ್ ಸೇಪರ್ಡೆಯಾಗುವುದಿಲ್ಲ.  ನಾನು ಮತ್ತು ಜನಾರ್ಧನ ಪೂಜಾರಿ ಕೂಡಾ ಹಳೆಯ ಸ್ನೇಹಿತರು.  ಅವರು ಬಿಜೆಪಿಗೆ ಬರ್ಲಿಲ್ಲ, ನಾನು ಕಾಂಗ್ರೆಸ್ ಗೆ ಹೋಗ್ಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next