Advertisement

ಚಾರ್ಮಾಡಿ ಘಾಟಿಯಲ್ಲಿ ವಾನರ ಪಡೆಗೆ ಬಾಳೆಹಣ್ಣು ನೀಡಿದ ನಳಿನ್ ಕುಮಾರ್ ಕಟೀಲ್

02:45 PM Jun 13, 2021 | Team Udayavani |

ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾನರ ಪಡೆಗೆ ಹಣ್ಣು ನೀಡಿ ಗಮನ ಸೆಳೆದರು.

Advertisement

ಲಾಕ್ ಡೌನ್ ನಿಂದ ವಾಹನ ಸಂಚಾರವಿಲ್ಲದೆ ಕಾರಣ ಕೋತಿಗಳು ಆಹಾರಕ್ಕಾಗಿ ಪರದಾಡಿದ್ದವು. ಹೀಗಾಗಿ ಬಜರಂಗದಳ ಕಾರ್ಯಕರ್ತರು ಘಾಟ್ ನ ಮಂಗಗಳಿಗೆ ಹಣ್ಣು ವಿತರಣೆ ಕಾರ್ಯ ಹಮ್ಮಿಕೊಂಡಿದ್ದರು. ಕಾರ್ಯಕರ್ತರು ಕೋಚಿಗಳಿಗೆ 100 ಕೆ.ಜಿ. ಹಣ್ಣು ನೀಡಿದ್ದರು.

ಇದನ್ನೂ ಓದಿ:ಭೂಮಿ ನುಂಗಲು ಮಾಸ್ಟರ್ ಪ್ಲ್ಯಾನ್:ರಾತ್ರೋ ರಾತ್ರಿ ನಿರ್ಮಾಣವಾಯಿತು ‘ಕೊರೊನಾ ಮಾತಾ’ ದೇವಸ್ಥಾನ

ಕಾರ್ಯಕರ್ತರು ಹಣ್ಣು ನೀಡುವಾಗ ಘಾಟಿಯಲ್ಲಿ ಸಂಚರಿಸುತ್ತಿದ್ದ ನಳಿನ್ ಕುಮಾರ್ ಕಟೀಲ್ ಇದನ್ನು ಕಂಡು, ವಾಹನ ನಿಲ್ಲಿಸಿ ಘಾಟಿಯಲ್ಲಿ ಕೆಲ ಕಾಲ ತಾವೂ ಕಾರ್ಯಕರ್ತರೊಂದಿಗೆ ಮಂಗಗಳಿಗೆ ಹಣ್ಣು ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next