Advertisement

ಬಿಎಸ್‌ವೈಗೆ ನಳಿನ್‌ ಕುಮಾರ್‌ ಕಟೀಲ್‌ ಅಭಿನಂದನೆ

08:18 AM May 16, 2020 | Lakshmi GovindaRaj |

ಬೆಂಗಳೂರು: ಯಡಿಯೂರಪ್ಪ ಅವರು ನಾಡಿನ ರೈತ, ಕಾರ್ಮಿಕ, ಶ್ರಮಿಕ ಸಮುದಾಯದವರಿಗೆ ಎರಡನೇ ವಿಶೇಷ ಪ್ಯಾಕೇಜ್‌ ಘೋಷಿಸಿರುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ವಾಗತಿಸಿದ್ದಾರೆ. ಮೆಕ್ಕೆ ಜೋಳ  ಬೆಳೆಯುವ 10 ಲಕ್ಷ ರೈತರಿಗೆ ತಲಾ 5000 ರೂ. ಪ್ರಕಟಿಸಲಾಗಿದೆ.

Advertisement

ಹಾಗೆಯೇ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 137 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಿಸಲಾಗಿದೆ. ಆ ಮೂಲಕ ಬಾಳೆ, ಪಪ್ಪಾಯ, ದ್ರಾಕ್ಷಿ, ಅಂಜೂರ, ಅನಾನಸ್‌,  ಕಲ್ಲಂಗಡಿ, ಖರ್ಜೂರ, ಬೋರೆಯಂತಹ 7 ಹಣ್ಣು ಬೆಳೆಗಾರರು, ಟೊಮೊಟೊ, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪು, ಈರೇಕಾಯಿ, ತೊಂಡೆಕಾಯಿಯಂತಹ 10 ಬಗೆಯ ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 15,000 ರೂ. ಪರಿಹಾರ ನೀಡುತ್ತಿರುವುದು ಸಂಕಷ್ಟದಲ್ಲಿರುವವರಿಗೆ ವರದಾನವಾಗಲಿ ದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

42,250 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ. ಪ್ರೋತ್ಸಾಹ ಧನ ನೀಡಿರುವುದು. ರಾಜ್ಯದ 1.25 ಲಕ್ಷ ಪವರ್‌ಲೂಮ್‌ ನಲ್ಲಿ  ಕಾರ್ಯ ನಿರ್ವಹಿಸುತ್ತಿರುವ ಪ್ರತಿ ಕಾರ್ಮಿಕರಿಗೆ 2000 ರೂ. ಪರಿಹಾರ ಧನ ಘೋಷಿಸುವ ಮೂಲಕ ಸಿಎಂ ಎಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿ ಜನತೆಯ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿ ದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದಿಸಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next