Advertisement

ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡ ಸಿಎಂ: ಪಾಟೀಲ

07:04 PM May 29, 2020 | Naveen |

ನಾಲತವಾಡ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ವ್ಯವಸ್ಥಿತವಾಗಿ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಸರಕಾರದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

Advertisement

ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ಸತತ ಎರಡು ತಿಂಗಳು ಕೇಂದ್ರ ಸರಕಾರದ ಎಲ್ಲ ಸಲಹೆ ಪಾಲನೆ ಮಾಡಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ. ನಾವು ಅವರಿಗೆ ಅಭಿನಂದನೆ ಸಲ್ಲಿಸಿಸುತ್ತೆನೆ. ವಲಸೆ ಕಾರ್ಮಿಕರು ಅನ್ಯ ರಾಜ್ಯದಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವುದನ್ನು ಅರಿತು ಎಲ್ಲರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಿದ್ದಾರೆ. ಅನ್ಯ ರಾಜ್ಯದಿಂದ ಬಂದವರಿಂದ ಸ್ವಲ್ಪ ಮಟ್ಟಿಗೆ ಸೋಂಕು ಹೆಚ್ಚಾಗುತ್ತಿದೆ. ಔಷಧಿ ಸಿಗುವವರೆಗೆ ಜನರು ಸಾಮಾಜಿಕ ಅಂತರ ಕಾಯ್ದಕೊಂಡು ಕೋವಿಡ-19 ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.

ಗ್ರಾಪಂ ಸಲಹಾ ಸಮಿತಿಗೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ನೇಮಕ ಮಾಡಲು ವಿಚಾರ ಮಾಡಲಾಗಿದೆ. ಕೇವಲ ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡುತ್ತಾರೆ ಎಂಬುವುದು ಸುಳ್ಳು ಪ್ರಚಾರವಾಗಿದೆ. ಸಲಹಾ ಸಮಿತಿಗೆ ಯಾವುದೇ ರೀತಿಯ ಅಧಿಕಾರ ಇರುವುದಿಲ್ಲ. ಕೇವಲ ಅವರು ಪಂಚಾಯತ್‌ ಅಭಿವೃದ್ಧಿಗೆ ಪಿಡಿಒ. ಅವರಿಗೆ ಸಲಹೆ ಮಾತ್ರ ನೀಡಲು ಅವಕಾಶವಿದೆ. ಅಧ್ಯಕ್ಷರ ರೀತಿ ಅವರಿಗೆ ಯಾವುದೇ ಅಧಿಕಾರ ಇರುವದಿಲ್ಲ. ಸಮಾಜ ಸೇವಕರಿಗೂ ಸಹ ಸಮೀತಿಯಲ್ಲಿ ನೇಮಕ ಮಾಡುವ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆಯನ್ನು ಮಾಡಲಾಗುವುದು ಎಂದರು.

ಜೂ.25 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವುದು ನಿಶ್ಚಿತ. ಮಕ್ಕಳ ಶಿಕ್ಷಣ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಸರಕಾರ ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಂಡಿದೆ. ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲಿದ್ದಾರೆ ಹಾಗೂ ಎಲ್ಲ ಮಕ್ಕಳಿಗೆ ಮಾಸ್ಕ್ ಸಹ ವಿತರಣೆ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು. ಕೂಲಿಗಾಗಿ ಅನ್ಯ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಪಂಗಳಲ್ಲಿ ಅವರಿಗೆ ಉದ್ಯೋಗವನ್ನು ಸರಕಾರವೇ ನೀಡಲಿದೆ. ಆದ್ದರಿಂದ ಎಲ್ಲರು ಜಾಬ್‌ ಕಾರ್ಡ್‌ ಮಾಡಿಸಿ ನಿಮ್ಮ ಗ್ರಾಮಗಳಲ್ಲಿ ಕೆಲಸ ಮಾಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next