Advertisement

ನಾಯರ್‌ ಆಯ್ಕೆ: ಬಿಸಿಸಿಐ ಸಮರ್ಥನೆ

06:00 AM May 12, 2018 | Team Udayavani |

ಹೊಸದಿಲ್ಲಿ: ಜೂನ್‌ 14ರಿಂದ ಬೆಂಗಳೂರಿನಲ್ಲಿ ನಡೆಯುವ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕೆ ರೋಹಿತ್‌ ಶರ್ಮ ಬದಲು ಕರ್ನಾಟಕದ ಕರುಣ್‌ ನಾಯರ್‌ ಅವರನ್ನು ಆಯ್ಕೆ ಮಾಡಿದ್ದನ್ನು ಬಿಸಿಸಿಐ ಸಮರ್ಥಿಸಿಕೊಂಡಿದೆ. 

Advertisement

ಬಹಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದ ಕರುಣ್‌ರಿಗೆ ದಿಢೀರ್‌ ಕರೆ ಬಂದಿತ್ತು. ರೋಹಿತ್‌ ಬದಲು ಕರುಣ್‌ಗೆ ಸ್ಥಾನ ನೀಡಿದ್ದರ ಹಿಂದಿನ ಉದ್ದೇಶವೇನೆಂದು ಪ್ರಶ್ನೆಗಳೆದ್ದಿದ್ದವು. ಇದಕ್ಕೆ ಉತ್ತರ ನೀಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌, ಸದ್ಯದ ಫಾರ್ಮ್ ಪ್ರಕಾರ ಕರುಣ್‌ ಉತ್ತಮವಾಗಿ ಆಡುತ್ತಿದ್ದಾರೆ, ಆದ್ದರಿಂದ ಅವರಿಗೊಂದು ಅವಕಾಶ ಕೊಡುವುದು ಅಗತ್ಯವಾಗಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next