Advertisement

ಪಠ್ಯಪುಸ್ತಕ ಪರಿಷ್ಕರಣೆ ಅವೈಜ್ಞಾನಿಕ: ನಾಗತೀಹಳ್ಳಿ

01:37 PM May 29, 2022 | Team Udayavani |

ಮಂಡ್ಯ: ಪಠ್ಯಪುಸ್ತಕ ಪರಿಷ್ಕರಣೆ ಕಾಲ ಕಾಲಕ್ಕೆ ಬದಲಾವಣೆ ಅಗತ್ಯ. ಇಲ್ಲದಿದ್ದರೆ ಅದು ಅವೈಜ್ಞಾನಿಕ ವಾಗುತ್ತದೆ. ಆದರೆ, ಈಗ ನಡೆಸಿರುವ ಪಠ್ಯಪುಸ್ತಕ ಪರಿಷ್ಕರಣೆ ಕ್ರಮ ಸರಿಯಾಗಿಲ್ಲ. ಸಂಪೂರ್ಣ ಅವೈಜ್ಞಾನಿಕ ಹಾಗೂ ಅಕಾಲಿಕವಾಗಿದೆ ಎಂದು ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

Advertisement

“ಉದಯವಾಣಿ’ಯೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಮ್ಮ ಪಕ್ಷದ ತತ್ವ-ಸಿದ್ಧಾಂತ ಏನೇ ಇರಲಿ. ಅವುಗಳನ್ನು ನಿಮ್ಮ ಕಚೇರಿಯೊಳಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳ ಮೇಲೆಹೇರುವ ಪ್ರಯತ್ನ ಮಾಡಬಾರದು. ಸರ್ವ ಜನಗಳಿಗೆಬೇಕಾಗುವ , ಎಲ್ಲರ ಹಿತ ಕಾಪಾಡುವ ತತ್ವಗಳನ್ನು ಪಠ್ಯದಲ್ಲಿ ಅಳವಡಿಸುವ ವಿಶಾಲ ಮನೋಭಾವ ಇದ್ದಾಗ ಇಂತಹ ತಪ್ಪುಗಳಾಗುವುದಿಲ್ಲ ಎಂದರು.

ನಾನು ಯಾವ ಪಕ್ಷದ ಪರ ಮಾತನಾಡುತ್ತಿಲ್ಲ. ಮಕ್ಕಳ ಪರ ಇದ್ದೇನೆ. ಎಲ್ಲ ಪಕ್ಷಗಳಸರ್ಕಾರ ಇದ್ದಾಗಲೂ ಅವರ ವಿರುದ್ಧವೂ ಮಾತನಾಡಿದ್ದೇನೆ.ನಾನೊಬ್ಬ ಶಿಕ್ಷಕನಾಗಿ ಮಾತನಾಡುತ್ತಿದ್ದೇನೆ. ಯಾರನ್ನೋ ಮೆಚ್ಚಿಸುವ ಕೆಲಸ ಮಾಡುವವರನ್ನು ಸಮಿತಿಗೆ ನೇಮಿಸಬಾರದು ಎಂದು ಹೇಳಿದರು.

ಈಗಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿರುವ ಕ್ರಮ ಸರಿಯಲ್ಲ. ಪಠ್ಯಪುಸ್ತಕಪರಿಷ್ಕರಣೆ ವಿಧಾನವೂ ಸರಿಯಾಗಿಲ್ಲ. ಸರಿಯಾದಕಾಲದಲ್ಲೂ ಪರಿಷ್ಕರಣೆ ನಡೆಯುತ್ತಿಲ್ಲ. ಇದು ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಬಹಳ ಅಪಾಯಕಾರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next