Advertisement

Nagarahole; ಜಿಂಕೆಗಳ ಕೊಂಬಿಗೆ ಸಿಲುಕಿದ್ದ ಮೀನಿನ ಬಲೆ ಬಿಡಿಸಿದ ಅರಣ್ಯ ಸಿಬಂದಿಗಳು

09:23 PM Jun 21, 2023 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಜಿಂಕೆಗಳ ಕೊಂಬುಗಳಿಗೆ ಸಿಲುಕಿಕೊಂಡಿದ್ದ ಮೀನಿನ ಬಲೆಯನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿ ಬಂಧ ಮುಕ್ತಗೊಳಿಸಲಾಗಿದೆ ಎಂದು ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕ ನರಗುಂದ ತಿಳಿಸಿದ್ದಾರೆ.

Advertisement

ಇತ್ತೀಚೆಗೆ ನಾಗರಹೊಳೆ ಉದ್ಯಾನದ ಡಿ.ಬಿಕುಪ್ಪೆ ವಲಯದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಮೂರು ಜಿಂಕೆಗಳಿಗೆ ಮೀನಿನ ಬಲೆ ಸಿಲುಕಿಕೊಂಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿ ಜಿಂಕೆಗಳನ್ನು ಸೆರೆ ಹಿಡಿದು, ಬಲೆ ಬಿಡಿಸಿ ಬಂಧ ಮುಕ್ತಗೊಳಿಸುವಂತೆ ಸೂಚಿಸಿದ್ದರ ಮೇರೆಗೆ ಮೇಟಿಕುಪ್ಪೆ ಎಸಿಎಫ್ ರಂಗಸ್ವಾಮಿ ನೇತೃತ್ವದಲ್ಲಿ ಆರ್.ಎಫ್.ಓ.ಮಧು, ಪಶುವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಸಿಬಂದಿ ಮಂಗಳವಾರ ಮೂರು ಜಿಂಕೆಗಳನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದು ಕೊಂಬುಗಳಿಗೆ ಸುತ್ತಿಕೊಂಡಿದ್ದ ಮೀನಿನ ಬಲೆಯನ್ನು ತೆರವುಗೊಳಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತೆಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕ ನರಗುಂದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next