Advertisement

ಕೊಳಕ ಮಂಡಲ ನುಂಗಿದ ನಾಗರ!

04:55 PM Nov 24, 2018 | |

ಶಿವಮೊಗ್ಗ: ನಾಗರ ಹಾವೊಂದು ಹೊಟ್ಟೆ ಹಸಿವಿನಿಂದ ಕೊಳಕ ಮಂಡಲ ಹಾವನ್ನು ನುಂಗಿದ್ದ ಅಪರೂಪದ ಘಟನೆ ಗುರುವಾರ ನಗರದಲ್ಲಿ ನಡೆದಿದೆ. ನಗರದ ಹೊರವಲಯ ಸೋಮಿನಕೊಪ್ಪದ ಬನಶಂಕರಿ ಬಡಾವಣೆಯಲ್ಲಿ ದಾಮೋದರ್‌ ಎಂಬವರ ಮನೆಯ ಮುಂದೆ ನಾಗರ ಹಾವೊಂದು ಮಲಗಿಕೊಂಡಿತ್ತು. ಎಷ್ಟೇ ಓಡಿಸಿದರೂ ಸಹ ಹಾವು ಹೋಗದೆ ಅಲ್ಲೇ ಇತ್ತು. ತಕ್ಷಣ ದಾಮೋದರ್‌ ಸ್ನೇಕ್‌ ಕಿರಣ್‌ ಅವರಿಗೆ ಫೋನ್‌ ಮಾಡಿದ್ದಾರೆ. ಸ್ನೇಕ್‌ ಕಿರಣ್‌ ಬಂದ ನಂತರ ಹಾವನ್ನು ಹಿಡಿಯಲು ಹೋದಾಗ ಅದು ಕೊಳಕ ಮಂಡಲವನ್ನು ಹೊರ ಹಾಕಿದೆ. ಅಷ್ಟರಲ್ಲಾಗಲೇ ಕೊಳಕ ಮಂಡಲ ಸಾವನ್ನಪ್ಪಿತ್ತು. ಸ್ನೇಕ್‌ ಕಿರಣ್‌ ನಾಗರ ಹಾವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ. ಹಾವುಗಳು ಆಹಾರ ಅರಸಿಕೊಂಡು ಹೋಗುವಾಗ ಅಪರೂಪಕ್ಕೆ ಈ ರೀತಿ ಘಟನೆಗಳು ನಡೆಯುತ್ತವೆ ಎನ್ನುತ್ತಾರೆ ಉರಗ ರಕ್ಷಕ ಸ್ನೇಕ್‌ ಕಿರಣ….

Advertisement
Advertisement

Udayavani is now on Telegram. Click here to join our channel and stay updated with the latest news.

Next