Advertisement

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

11:37 PM Sep 13, 2024 | Team Udayavani |

ಬೆಂಗಳೂರು: ನಾಗಮಂಗಲ ಕೋಮು ಸಂಘರ್ಷದಲ್ಲಿ ಅಮಾಯಕ ಹಿಂದುಗಳನ್ನು ಸರಕಾರ ಉದ್ದೇಶಪೂರ್ವಕವಾಗಿ ಸಿಲುಕಿಸಿದ್ದು ರಾಹುಲ್‌ ಗಾಂಧಿಯವರ ಮೊಹಬ್ಬತ್‌ ಕಿ ದುಖಾನ್‌ನಿಂದ ಕಲ್ಲು ತೂರಿ, ಪೆಟ್ರೋಲ್‌ ಬಾಂಬ್‌ ಎಸೆದವರನ್ನು ರಕ್ಷಣೆ ಮಾಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರ ಮೊಹಬ್ಬತ್‌ ಕಿ ದುಖಾನ್‌ನಿಂದ ಕಲ್ಲು ತೂರಾಟ, ಪೆಟ್ರೋಲ್‌ ಬಾಂಬ್‌ ಎಸೆದು ಬೆಂಕಿ ಹಚ್ಚಿದವರ ವಿರುದ್ಧ ಕ್ರಮವಿಲ್ಲ. ಆದರೆ ಈ ಘಟನೆಯಲ್ಲಿ ನೊಂದ, ಶಾಂತಿಯುತವಾಗಿ ಗಣೇಶ ವಿಸರ್ಜನ ಮೆರವಣಿಗೆ ಮಾಡಿದ 23 ಅಮಾಯಕ ಹಿಂದೂಗಳ ಮೇಲೆ ಮೊಕದ್ದಮೆ ಹೂಡಲಾಗಿದೆ. ಹಿಂದುಗಳ ವಿರುದ್ಧ ಹೂಡಿರುವ ದಾವೆ ಹಿಂಪಡೆಯದಿದ್ದರೆ ಪ್ರತಿ ಮಂಡಲ, ಹಳ್ಳಿಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next