Advertisement
ಆಗಷ್ಟೇ ಮದುವೆಯಾದ ರಾಣಿ ತನ್ನ ಗಂಡನ ಸಾಮೀಪ್ಯವನ್ನು ಸದಾ ಬಯಸುತ್ತಿರುತ್ತಾಳೆ. ಆದರೆ, ಆತ ಮನೆಯಿಂದ ಸದಾ ಹೊರಗೇ ಉಳಿದು ಪರಸ್ತ್ರೀ ಸಹವಾಸ ಮಾಡುತ್ತಿರುತ್ತಾನೆ. ಈ ಹೊತ್ತಿನಲ್ಲಿ ರಾಣಿಯ ವಿರಹವನ್ನು ತಣಿಸುವ ಕೆಲಸವನ್ನು ಒಂದು ಹಾವು ಮಾಡುತ್ತಿರುತ್ತೆ. ಗಿರೀಶ್ ಕಾರ್ನಾಡ್ ರಚಿಸಿರುವ ನಾಟಕವನ್ನು ಸುನಯನ ಪ್ರೇಮಚಂದರ್ ನಿರ್ದೇಶಿಸಿದ್ದಾರೆ. ಲೈರಿಯಾ ಕುರಿಯನ್, ನಳಿನಿ ನಾರಾಯಣಿ, ಶ್ರೀಹರಿ ಅಜಿತ್ ಬಣ್ಣ ಹಚ್ಚಿದ್ದಾರೆ.
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.