Advertisement

Thandel: ಉಡುಪಿಯ ಮಲ್ಪೆಯಲ್ಲಿ ನಾಗಚೈತನ್ಯ – ಸಾಯಿಪಲ್ಲವಿ ʼಥಂಡಲ್ʼ ಚಿತ್ರೀಕರಣ ಆರಂಭ

06:42 PM Dec 21, 2023 | Team Udayavani |

ಹೈದರಾಬಾದ್: ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ʼಥಂಡಲ್ʼ ಸಿನಿಮಾದ ಚಿತ್ರೀಕರಣ ಗುರುವಾರ (ಡಿ.21 ರಂದು) ಆರಂಭಗೊಂಡಿದೆ.

Advertisement

ʼಕಾರ್ತಿಕೇಯ 2ʼ ಸಿನಿಮಾದ ನಿರ್ದೇಶಕ ಚಂದೂ ಮೊಂಡೆತಿ ಅವರು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದು, ಸತ್ಯ ಘಟನೆಯನ್ನು ಆಧರಿಸಿ ಸಿನಿಮಾ ಬರುತ್ತಿದೆ. ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ʼಲವ್‌ ಸ್ಟೋರಿʼ ಬಳಿಕ ʼಥಂಡಲ್‌ʼ ಮೂಲಕ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ನಾಯಕ ನಾಗಚೈತನ್ಯ ಅವರ ಸಾಹಸದ ದೃಶ್ಯದ ಚಿತ್ರೀಕರಣ ಉಡುಪಿಯ ಮಲ್ಪೆಯ ಬಂದರಿನಲ್ಲಿ ನಡೆಯಲಿದೆ. ಸಿನಿಮಾದಲ್ಲಿ‌ನಾಗಚೈತನ್ಯ ಮೀನುಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ಉದ್ದ ಕೂದಲು ಹಾಗೂ ಗಡ್ಡವನ್ನು ಬಿಟ್ಟು ಲುಕ್‌ ಬದಲಾಯಿಸಿಕೊಂಡಿದ್ದಾರೆ ಎಂದು ʼ ಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ.

ಚಿತ್ರದ ಮೊದಲ ಶೆಡ್ಯೂಲ್ ಸುದೀರ್ಘವಾಗಿದ್ದು, ಈ ಇದರಲ್ಲಿ ಸಿನಿಮಾದಲ್ಲಿರುವ ಬಹುತೇಕ ಕಲಾವಿದರ ಪಾತ್ರದ ಚಿತ್ರೀಕರಣ ಇರಲಿದೆ ಎಂದು ವರದಿ ತಿಳಿಸಿದೆ.

ʼಥಂಡಲ್ʼ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತ್ತು. ನಾಗ ಚೈತನ್ಯ ಅವರ ತಂದೆ ನಾಗಾರ್ಜುನ ಅಕ್ಕಿನೇನಿ ಮತ್ತು ಅವರ ಚಿಕ್ಕಪ್ಪ ವೆಂಕಟೇಶ್ ದಗ್ಗುಬಾಟಿ ಅವರು ಚಿತ್ರದ ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next